ನವದೆಹಲಿ(ಸೆ.26): ಬಿಜೆಪಿಯ ಕೇರಳ ಭಾಗದ ಎನ್ಡಿಎ ಕೂಟಕ್ಕೆ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕಲ್ಲಿಕೋಟೆಯಲ್ಲಿ ನಡೆದ ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ರಾಜೀವ್ ಚಂದ್ರಶೇಖರ್, ‘‘ಕೇರಳ ರಾಜಕೀಯ ವ್ಯವಸ್ಥೆಯಲ್ಲಿ ಪರ್ಯಾಯ ಶಕ್ತಿ ಉದಯಿಸಬೇಕೆಂಬ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಅದು ಲಕ್ಷಾಂತರ ಮಂದಿ ತುಳಿತಕ್ಕೊಳಪಟ್ಟವರು ಮತ್ತು ಯುವ ಜನತೆಯ ಅಭಿವೃದ್ಧಿಗೆ ಸಮಾನ ಅವಕಾಶ ನೀಡುವಂತಾಗಿರಬೇಕು,’’ ಎಂದಿದ್ದಾರೆ. ಅಲ್ಲದೆ, ಎನ್ಡಿಎ ಕೇರಳದಲ್ಲಿ ಮತ ಹಂಚಿಕೆ ಮತ್ತು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ ಎಂದಿದ್ದಾರೆ.