ಸ್ಕೈಬಾರ್ ಗಲಾಟೆ ಪ್ರಕರಣ: ವಿಜಾಯಾನಂದ ಕಾಶಪ್ಪನವರ್ ಗೆ ವಾರಂಟ್ ಜಾರಿ

Published : Dec 29, 2016, 07:42 AM ISTUpdated : Apr 11, 2018, 12:59 PM IST
ಸ್ಕೈಬಾರ್  ಗಲಾಟೆ ಪ್ರಕರಣ: ವಿಜಾಯಾನಂದ ಕಾಶಪ್ಪನವರ್ ಗೆ ವಾರಂಟ್ ಜಾರಿ

ಸಾರಾಂಶ

ಸ್ಕೈಬಾರ್  ಗಲಾಟೆ ಪ್ರಕರಣದಲ್ಲಿ ಶಾಸಕ ವಿಜಾಯಾನಂದ ಕಾಶಪ್ಪನವರ್​​ಗೆ ಕಂಟಕ ​​​​ಶುರುವಾಗಿದೆ. 1ನೇ ಎಸಿಎಂಎಂ ಕೋರ್ಟ್​ನಿಂದ ಇಂದು ಕೋರ್ಟ್​​ಗೆ ಹಾಜರಾಗುವಂತೆ ಕಾಶಪ್ಪನವರ್​ಗೆ ವಾರಂಟ್​​​​ ಜಾರಿಗೊಳಿಸಲಾಗಿದೆ.

ಬೆಂಗಳೂರು (ಡಿ. 29): ಸ್ಕೈಬಾರ್  ಗಲಾಟೆ ಪ್ರಕರಣದಲ್ಲಿ ಶಾಸಕ ವಿಜಾಯಾನಂದ ಕಾಶಪ್ಪನವರ್​​ಗೆ ಕಂಟಕ ​​​​ಶುರುವಾಗಿದೆ. 1ನೇ ಎಸಿಎಂಎಂ ಕೋರ್ಟ್​ನಿಂದ ಇಂದು ಕೋರ್ಟ್​​ಗೆ ಹಾಜರಾಗುವಂತೆ ಕಾಶಪ್ಪನವರ್​ಗೆ ವಾರಂಟ್​​​​ ಜಾರಿಗೊಳಿಸಲಾಗಿದೆ.

ಪ್ರಕರಣದ ಹಿನ್ನೆಲೆ

2014ರ ಜುಲೈ 1 ರ ರಾತ್ರಿ ಯುಬಿ ಸಿಟಿಯ ಸ್ಕೈಬಾರ್​ನಲ್ಲಿ ಕುಟುಂಬ ಸಮೇತ ಪಾರ್ಟಿ ಮಾಡಿದ್ದ ಶಾಸಕ ಕಾಶಪ್ಪನವರ್ ಗಲಾಟೆ ನಡೆಸಿದ್ದರು. ರಾತ್ರಿ 1 ಗಂಟೆಯ ನಂತರವೂ ಬಾರ್​ನಲ್ಲಿ ಶಾಸಕ ಮತ್ತವರ ಪಟಾಲಂ ಅವಧಿ ಮೀರಿದ ನಂತರವೂ ಕುಳಿತಿದ್ದರು. ಅವಧಿ ಮೀರಿದ ನಂತರ ಹೋಟೆಲ್​ ತೆರೆದಿದ್ದನ್ನು ನೋಡಿ ಕಬ್ಬನ್​​ ಪಾರ್ಕ್​​​ ಠಾಣೆ ಪೇದೆಗಳಾದ ಕಿರಣ್​​ ಹಾಗೂ ಪ್ರಶಾಂತ ನಾಯ್ಕ್​​​ ಪ್ರಶ್ನಿಸಿದ್ದರು. ಇದೇ ವೇಳೆ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಸಿ, ಬೂಟ್​​ ತೋರಿಸಿ ಶಾಸಕ ಕಾಶಪ್ಪನವರ್​ ಹಲ್ಲೆ ನಡೆಸಿದ್ದರು.

ಅಧಿಕಾರ ಗತ್ತು ತೋರಿಸಿ, ರೌಡಿಶೀಟರ್​ನಿಂದ ಪೊಲೀಸರಿಗೆ ಹಲ್ಲೆ ನಡೆಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಬಿ ಪೊಲೀಸರು ಸಲ್ಲಿಸಿರುವ ಚಾರ್ಜ್​ ಶೀಟ್​​ ಪ್ರತಿ ಸುವರ್ಣ ನ್ಯೂಸ್​​ಗೆ ಲಭ್ಯವಾಗಿದೆ.

 

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿಕ್ಕಮಗಳೂರು ಮುಳ್ಳಯ್ಯನಗಿರಿ ರಸ್ತೆಯಲ್ಲಿ ಪ್ರವಾಸಿ ಜೀಪ್ ಪಲ್ಟಿ; ಕೇರಳದ ಆರು ಶಾಲಾ ಮಕ್ಕಳಿಗೆ ಗಾಯ
ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದ ಬಾರಿ ದುರಂತ, ಉಳಿತು ಪ್ರಯಾಣಿಕರ ಪ್ರಾಣ