ಶ್ಯಾಮ್ ಭಟ್ ಕೊರಳಿಗೆ ಉರುಳಾಗಲಿದೆಯಾ ಸೈಟು ಹಂಚಿಕೆ ಪ್ರಕರಣಗಳು?

Published : Dec 24, 2016, 11:49 AM ISTUpdated : Apr 11, 2018, 01:07 PM IST
ಶ್ಯಾಮ್ ಭಟ್ ಕೊರಳಿಗೆ ಉರುಳಾಗಲಿದೆಯಾ ಸೈಟು ಹಂಚಿಕೆ ಪ್ರಕರಣಗಳು?

ಸಾರಾಂಶ

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ವಿವಾದಾತ್ಮಕ ಐಎಎಸ್​ ಅಧಿಕಾರಿ ಟಿ.ಶ್ಯಾಮ್​ ಭಟ್​ ಅವರಿಗೆ ಕಂಟಕ ಶುರುವಾಗಿದೆ. ಬಿಡಿಎ ಆಯುಕ್ತರಾಗಿದ್ದ ಅವಧಿಯಲ್ಲಿ ಅನಧಿಕೃತವಾಗಿ ಸಿ.ಎ.ಸೈಟ್​ಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹಂಚಿಕೆ ಮಾಡಿದ್ದ ಪ್ರಕರಣಗಳು ಶ್ಯಾಮ್​​ಭಟ್​ ಕೊರಳಿಗೆ ಉರುಳಾಗುವ ಸಂಭವವಿದೆ.

ಬೆಂಗಳೂರು (ಡಿ. 24): ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ವಿವಾದಾತ್ಮಕ ಐಎಎಸ್​ ಅಧಿಕಾರಿ ಟಿ.ಶ್ಯಾಮ್​ ಭಟ್​ ಅವರಿಗೆ ಕಂಟಕ ಶುರುವಾಗಿದೆ. ಬಿಡಿಎ ಆಯುಕ್ತರಾಗಿದ್ದ ಅವಧಿಯಲ್ಲಿ ಅನಧಿಕೃತವಾಗಿ ಸಿ.ಎ.ಸೈಟ್​ಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹಂಚಿಕೆ ಮಾಡಿದ್ದ ಪ್ರಕರಣಗಳು ಶ್ಯಾಮ್​​ಭಟ್​ ಕೊರಳಿಗೆ ಉರುಳಾಗುವ ಸಂಭವವಿದೆ.

ಈ ಸಂಬಂಧ ಮಾಹಿತಿ ಹಕ್ಕು ಕಾರ್ಯಕರ್ತ ಅಶೋಕ್​ಕುಮಾರ್​ ಅಡಿಗ ಅನ್ನುವವರು ಸಲ್ಲಿಸಿದ್ದ ದೂರು ಅನ್ವಯ ಶ್ಯಾಮ್ ಭಟ್​ ವಿರುದ್ಧ ಎಫ್ಐಆರ್​ ದಾಖಲಿಸಿಕೊಳ್ಳಲು ಎಸಿಬಿ ಸಿದ್ಧತೆ ನಡೆಸಿದೆ. ಶ್ಯಾಮ್​ ಭಟ್​ ವಿರುದ್ಧ ಎಫ್​ಐಆರ್​ ದಾಖಲಿಸಿ ತನಿಖೆ ನಡೆಸುವುದಕ್ಕೆ ಭ್ರಷ್ಟಾಚಾರ ನಿಗ್ರಹ ದಳ ಸರ್ಕಾರದ ಪೂರ್ವಾನುಮತಿ ಕೋರಿದೆ. ಪೂರ್ವಾನುಮತಿ ಕೋರಿದ ಕಡತಕ್ಕೆ ವಿಧಾನಸೌಧದಲ್ಲಿ ಇನ್ನೂ ಮುಕ್ತಿ ಸಿಕ್ಕಿಲ್ಲ.

ಎಸಿಬಿ ಪತ್ರ ಬರೆದು ಮೂರೂವರೆ ತಿಂಗಳಾಗಿದೆ. ಆದರೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮೂಲಗಳ ಪ್ರಕಾರ ಈ ಕಡತ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ಕಚೇರಿಯಲ್ಲಿದೆ. ಶ್ಯಾಮ್​ ಭಟ್​ ವಿರುದ್ಧ ಎಫ್​ಐಆರ್​ ದಾಖಲಿಸ್ಲಿಕ್ಕೆ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅನುಮತಿ ಕೊಡಬೇಕು. ಮೂರೂವರೆ ತಿಂಗಳಾದರೂ ಅನುಮತಿ ಸಿಗದೇ ಇರುವುದನ್ನು ನೋಡಿದರೆ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮತ್ತು ನಗರಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳ ಕೈವಾಡ ಇದೆ ಎಂದು ದೂರುದಾರ ಅಶೋಕ್​ಕುಮಾರ್​ ಅಡಿಗ ಆರೋಪಿಸಿದ್ದಾರೆ. ಇದಲ್ಲದೆ, ಹೈಕೋರ್ಟ್ ನಲ್ಲಿ ಮೆಟ್ಟಿಲೇರಿ ಕಾನೂನು ಹೋರಾಟ ನಡೆಸುವ ಸೂಚನೆ ನೀಡಿದ್ದಾರೆ.

ಶ್ಯಾಮ್​ ಭಟ್​ ವಿರುದ್ಧ ದೂರಿನಲ್ಲಿರುವ ಆರೋಪಗಳೇನು?

# ಕರ್ತವ್ಯ ಲೋಪ, ಅಪರಾಧಿಕ ಒಳ ಸಂಚು, ಸರ್ಕಾರದ ಬೊಕ್ಕಸಕ್ಕೆ ಹಾನಿ

# 1,300 ಸಿ.ಎ.ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ

# ಸಿ.ಎ.ನಿವೇಶನಗಳ ಬಾಡಿಗೆ ನೀಡುವಲ್ಲಿ ಅವ್ಯವಹಾರ

# ಅವ್ಯವಹಾರಕ್ಕೆ ಶ್ಯಾಮ್​ ಭಟ್​ರಿಂದಲೇ ಕುಮ್ಮಕ್ಕು ಶ್ಯಾಂ ಭಟ್

# ಪ್ರಭಾವಿ ಶಿಕ್ಷಣ ಸಂಸ್ಥೆಗಳಿಗೆ ಅನಧಿಕೃತವಾಗಿ ಸಿ.ಎ.ನಿವೇಶನಗಳ ಹಂಚಿಕೆ

# ಹಲವು ಸಿ.ಎ.ನಿವೇಶನಗಳ ಮಾಲೀಕರಿಗೆ ಗುತ್ತಿಗೆ ಅವಧಿ ನವೀಕರಿಸಿಲ್ಲ

# ಗುತ್ತಿಗೆ ಅವಧಿ ನವೀಕರಿಸದರಿಂದ ಬಿಡಿಎಗೆ ಕೋಟ್ಯಂತರ ರೂಪಾಯಿ ನಷ್ಟ

# ಸಿ.ಎ.ನಿವೇಶನಗಳ ಹಂಚಿಕೆಯಲ್ಲಿ ಮಾರ್ಗಸೂಚಿಗಳ ಉಲ್ಲಂಘನೆ

# ಸಿ.ಎ.ನಿವೇಶನಗಳ ಉಪ ಗುತ್ತಿಗೆ ನೀಡಿದ್ದರೂ ಕ್ರಮವಿಲ್ಲ

# ಹಂಚಿಕೆಯಾದ ಉದ್ದೇಶಕ್ಕೆ ವಿರುದ್ಧವಾಗಿ ಸಿ.ಎ.ನಿವೇಶನ ಬಳಕೆ ಇದ್ದರೂ ಕ್ರಮವಿಲ್ಲ

# ಶೈಕ್ಷಣಿಕ ಉದ್ದೇಶಕ್ಕೆ ಹಂಚಿಕೆಯಾದ ನಿವೇಶನಗಳು ವಾಣಿಜ್ಯ ಉದ್ದೇಶಕ್ಕೆ ಬಳಕೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೂಪಾಯಿ ಕುಸಿದರೂ ಪ್ರಗತಿಯತ್ತ ಭಾರತ: ನಿಜಕ್ಕೂ ಏನಾಗುತ್ತಿದೆ?‌
87 ವರ್ಷದ ಪ್ರಸಿದ್ಧ ಪೇಂಟರ್ ಮಗುವಿಗೆ ತಾಯಿಯಾದ 37 ವರ್ಷದ ಪತ್ನಿ, ಉಳಿದ ಮಕ್ಕಳೊಂದಿಗೆ ಬಂಧವೇ ಕಟ್