ರೆಡ್ಡಿಗೆ ಮತ್ತೊಂದು ಕಾನೂನು ಕುಣಿಕೆ, ಖಾರದಿಪುಡಿ ಮಹೇಶ್ ಎಸ್ಕೇಪ್!

Published : Dec 27, 2018, 05:51 PM IST
ರೆಡ್ಡಿಗೆ ಮತ್ತೊಂದು ಕಾನೂನು ಕುಣಿಕೆ, ಖಾರದಿಪುಡಿ ಮಹೇಶ್ ಎಸ್ಕೇಪ್!

ಸಾರಾಂಶ

ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.  ಆಂಬಿಡೆಂಟ್ ಕಂಪನಿಯ ಪ್ರಕರಣದಲ್ಲಿಯೂ ರೆಡ್ಡಿ ಅವರ ಹೆಸರು ಕೇಳಿ ಬಂದಿತ್ತು. ಅದೆಲ್ಲ ಮುಗಿದಿದೆ ಎನ್ನುವಾಗ ರೆಡ್ಡಿ ಮತ್ತೊಂದು ಪ್ರಕರಣ ಎದುರಿಸಬೇಕಾಗಿದೆ.

ಬೆಂಗಳೂರು[ಡಿ.27] ಗಾಲಿ ಜನಾರ್ದನ ರೆಡ್ಡಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಜನಾರ್ದನ ರೆಡ್ಡಿ ವಿರುದ್ಧ ಮತ್ತೊಂದು ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ಹೊಸಪೇಟೆಯ ಶ್ರೀ ಮಿನರಲ್ ಕಂಪನಿಯಿಂದ ಅಕ್ರಮ ಗಣಿಗಾರಿಕೆ ಆರೋಪ ಕೇಳಿಬಂದಿತ್ತು. ಇದೇ ಆಧಾರದಲ್ಲಿ ಲೋಕಾಯುಕ್ತ ವರದಿ ಸಲ್ಲಿಸಿತ್ತು.  ಜನಾರ್ದನ ರೆಡ್ಡಿ, ಶ್ರೀನಿವಾಸ ರೆಡ್ಡಿ ಹಾಗು ಅಲಿಯಾಸ್ ವಿರುದ್ದ ಚಾರ್ಜ್ ಶೀಟ್ ಇದೀಗ ಸಲ್ಲಿಕೆಯಾಗಿದೆ.

ರೆಡ್ಡಿ VS ಕುಮಾರಸ್ವಾಮಿ,  ಯಾರು ಪುಣ್ಯಕೋಟಿ? ಯಾರು ರಾಕ್ಷಸ?

ಶಾಸಕರು, ಸಂಸದರ ವಿರುದ್ಧದ ವಿಶೇಷ ನ್ಯಾಯಾಲಯಕ್ಕೆ ಆರೋಪ. 1.69 ಲಕ್ಷ ಟನ್ ಅದಿರು ಅಕ್ರಮ ಸಾಗಾಣಿಕೆ ಆರೋಪ. ಈ  ಶ್ರೀನಿವಾಸ್ ರೆಡ್ಡಿ ಎಂಬುವರು ಜನಾರ್ದನ ರೆಡ್ಡಿ ಆಪ್ತ ಹಾಗು ಓಬಳಾಪುರಂ ಮೈನಿಂಗ್ ಕಂಪನಿ ಪಾಲುದಾರರಾಗಿದ್ದರು.

ಶೇಖ್ ಸಾಬ್ ಗಣಿಯಲ್ಲಿ ಅಕ್ರಮ ನಡೆಸಿದ ಆರೋಪ ಸಹ ಇಲ್ಲಿದೆ.  ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಚಾರ್ಚ್ ಶೀಟ್ ಸಲ್ಲಿಕೆಯಾಗಹಿದ್ದು  A1 ಜನಾರ್ದನ ರೆಡ್ಡಿ, A2  ಅಲಿಖಾನ್ ಮತ್ತು A3 ಯಾಗಿ ಶ್ರೀನಿವಾಸ ರೆಡ್ಡಿ ಮೇಲೆ ಚಾರ್ಜ್‌ ಶೀಟ್ ಸಲ್ಲಿಕೆಯಾಗಿದೆ.  ಸುಮಾರು‌ 1069 ಮೆ.ಟನ್‌ ಅದಿರು ಅಕ್ರಮ ಗಣಿಗಾರಿಗೆ‌ ನಡೆಸಿದ್ದು ಅಕ್ರಮ ಗಣಿಗಾರಿಕೆ ನಡೆಸಿ ರಾಜ್ಯ ಸರ್ಕಾರಕ್ಕೆ 23,89,650 ನಷ್ಟ ಮಾಡಿದ್ದಾರೆ ಎಂದು ವಿಶೇಷ ತನಿಖಾ ದಳದ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ.


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಖ್ಯಮಂತ್ರಿ ಅಧಿಕಾರ ಹಸ್ತಾಂತರದ ಬಗ್ಗೆ ನಮಗೆ ಏನೂ ಗೊತ್ತಿಲ್ಲ: ಸಚಿವ ರಾಮಲಿಂಗಾರೆಡ್ಡಿ
ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು