ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಿದ್ದಗಂಗಾಶ್ರೀಗಳ ಬೆಂಬಲ?

By Suvarna Web DeskFirst Published Sep 10, 2017, 5:24 PM IST
Highlights

ಎಂಬಿ ಪಾಟೀಲ್ ಅವರು ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಶ್ರೀಗಳು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಬೆಂಬಲಿಸುವ ಮಾತುಗಳನ್ನಾಡಿದರೆನ್ನಲಾಗಿದೆ. ಶ್ರೀಗಳೊಂದಿಗೆ ಸಚಿವರು ಮಾತನಾಡುವ ವೇಳೆ, ಮಠದ ಅಧಿಕಾರಿ ಶಿವಕುಮಾರ್ ಹಾಗೂ ಕೆಲ ಶಿಷ್ಯರು ಇದ್ದರಂತೆ. ಹಾಗೆಂದು ಎಂಬಿ ಪಾಟೀಲ್ ಅವರು ಹೇಳಿದ್ದಾರೆ.

ಬೆಂಗಳೂರು(ಸೆ. 10): ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ನಡೆಯುತ್ತಿರುವ ಹೋರಾಟಕ್ಕೆ ಇದೀಗ ಹೊಸ ಶಕ್ತಿ ತುಂಬುವ ಬೆಳವಣಿಗೆಯಾಗಿದೆ. ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗಾಯತ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಲಿಂಗಾಯತರಲ್ಲಿ ಅತ್ಯುಚ್ಚ ಗೌರವ ಹೊಂದಿರುವ ಸಿದ್ದಗಂಗಾಶ್ರೀಗಳು ಇದೇ ಮೊದಲ ಬಾರಿಗೆ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದ ಬಗ್ಗೆ ಮಾತನಾಡಿದ್ದಾರೆನ್ನಲಾಗಿದೆ.

ಈ ವಿಚಾರವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಎಂ.ಬಿ.ಪಾಟೀಲ್, ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ಸಿದ್ದಗಂಗಾಶ್ರೀಗಳು ಬೆಂಬಲ ಕೊಟ್ಟಿರುವಾಗ ಬೇರಾವುದೇ ಬುದ್ಧಿಜೀವಿಗಳ ಸಲಹೆಗಳು ತಮಗೆ ಬೇಕಿಲ್ಲ ಎಂದಿದ್ದಾರೆ. ಲಿಂಗಾಯತರಿಗೆ ಸಿದ್ದಗಂಗಾಶ್ರೀಗಳೇ ಸುಪ್ರೀಂಕೋರ್ಟ್ ಇದ್ದಂತೆ. ಅವರಷ್ಟು ಶ್ರೇಷ್ಠರು ಯಾರೂ ಇಲ್ಲ. ಅವರು ಈ ಹೋರಾಟಕ್ಕೆ ಬೆಂಬಲ ನೀಡಿದ್ದು ತನ್ನ ಜೀವನದ ಅತ್ಯಂತ ಸಂತಸದ ಕ್ಷಣ ಎಂದು ಸುದ್ದಿಗೋಷ್ಠಿಯಲ್ಲಿ ಸಚಿವರು ಹೇಳಿಕೊಂಡಿದ್ದಾರೆ.

Latest Videos

ಎಂಬಿ ಪಾಟೀಲ್ ಅವರು ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಶ್ರೀಗಳು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಬೆಂಬಲಿಸುವ ಮಾತುಗಳನ್ನಾಡಿದರೆನ್ನಲಾಗಿದೆ. ಶ್ರೀಗಳೊಂದಿಗೆ ಸಚಿವರು ಮಾತನಾಡುವ ವೇಳೆ, ಮಠದ ಅಧಿಕಾರಿ ಶಿವಕುಮಾರ್ ಹಾಗೂ ಕೆಲ ಶಿಷ್ಯರು ಇದ್ದರಂತೆ. ಹಾಗೆಂದು ಎಂಬಿ ಪಾಟೀಲ್ ಅವರು ಹೇಳಿದ್ದಾರೆ.

click me!