
ಬೆಂಗಳೂರು (ಸೆ.16): ಕನ್ನಡ ಚಿತ್ರರಂಗದ ನಟಿ ಶೃತಿ ತಮ್ಮ ಜನ್ಮ ದಿನವನ್ನ ಸರಳವಾಗಿ ಆಚರಿಸಿಕೊಳ್ಳೋಕೆ ನಿರ್ಧರಿಸಿದ್ದಾರೆ. ಪ್ರತಿ ವರ್ಷ ಸಮಾಜ ಮುಖಿ ಕೆಲಸಗಳೊಂದಿಗೆ ಜನ್ಮ ದಿನ ಆಚರಿಸುತ್ತಿದ್ದರು ಶೃತಿ. ಆದರೆ, ಈ ವರ್ಷ ತೀರ ಸರಳವಾಗಿಯೇ ಹುಟ್ಟು ಹಬ್ಬ ಮಾಡಿಕೊಳ್ಳುತ್ತಿರುವುದಾಗಿ ವರಧಿಯಾಗಿದೆ.
ಶೃತಿ ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ ಕಾರಣ ಕಾವೇರಿ ನದಿ ನೀರಿನ ಹೋರಾಟ ಮತ್ತು ಮಹದಾಯಿ ಹೋರಾಟ. ಈ ಎರಡೂ ವಿಚಾರದಲ್ಲಿ ಕನ್ನಡಿಗರು ನೊಂದಿದ್ದಾರೆ. ಆ ಹಿನ್ನೆಲೆಯಲ್ಲಿಯೇ ನಟಿ ಶೃತಿ ತೀರ ಸರಳವಾಗಿಯೇ ಜನ್ಮ ದಿನ ಆಚರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಸೆಪ್ಟೆಂಬರ್-18 ರಂದು ತಮ್ಮ ಜನ್ಮ ದಿನವನ್ನು ಕುಟುಂಬ ಸಮೇತ ತುಮಕೂರಿನ ಶ್ರೀ ಶಿವಕುಮಾರ್ ಸ್ವಾಮಿಜಿಗಳ ಸನ್ನಿಧಿಗೆ ತೆರಳಿ. ಅಲ್ಲಿ ಅವರ ಆಶೀರ್ವಾದದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.