ನೋಟು ನಿಷೇಧ: ಕಳೆದ 10 ವರ್ಷಗಳಲ್ಲಿ ದೇಶ ಕಂಡ ಕೆಟ್ಟ ಆಡಳಿತವಿದು

Published : Jan 06, 2017, 01:00 PM ISTUpdated : Apr 11, 2018, 01:07 PM IST
ನೋಟು ನಿಷೇಧ: ಕಳೆದ 10 ವರ್ಷಗಳಲ್ಲಿ ದೇಶ ಕಂಡ ಕೆಟ್ಟ ಆಡಳಿತವಿದು

ಸಾರಾಂಶ

ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮದ ವಿರುದ್ಧ ಶಿವಸೇನೆ ತೀವ್ರ ವಾಗ್ದಾಳಿ ನಡೆಸಿದೆ. ಕಳೆದ 10 ವರ್ಷಗಳಲ್ಲಿ ಇದೊಂದು ಕೆಟ್ಟ ಆಡಳಿತವಾಗಿದೆ ಎಂದು ಶಿವಸೇನೆ ನೋಟು ನಿಷೇಧವನ್ನು ಬಣ್ಣಿಸಿದೆ.

ನವದೆಹಲಿ(ಜ.06): ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮದ ವಿರುದ್ಧ ಶಿವಸೇನೆ ತೀವ್ರ ವಾಗ್ದಾಳಿ ನಡೆಸಿದೆ. ಕಳೆದ 10 ವರ್ಷಗಳಲ್ಲಿ ಇದೊಂದು ಕೆಟ್ಟ ಆಡಳಿತವಾಗಿದೆ ಎಂದು ಶಿವಸೇನೆ ನೋಟು ನಿಷೇಧವನ್ನು ಬಣ್ಣಿಸಿದೆ.

ಬಿಜೆಪಿ ನಾಯಕರು ಭ್ರಮೆಯ ಸ್ವರ್ಗದಲ್ಲಿದ್ದಾರೆ. ದೇಶದಲ್ಲಿರುವ ಕಪ್ಪುಹಣವನ್ನು ತೊಡೆದು ಹಾಕುತ್ತದೆ ಎಂದು ಮೂರ್ಖರಂತೆ ಯೋಚಿಸುತ್ತಿದ್ದಾರೆ. ನೋಟು ನಿಷೇಧವು ಕಾಳಧನಿಕರಿಗೆ ಪೆಟ್ಟು ನೀಡುವ ಬದಲು ಮಧ್ಯಮ ವರ್ಗದವರಿಗೆ, ಬಡವರಿಗೆ, ನಿರುದ್ಯೋಗಿಗಳನ್ನು ಸಂಕಷ್ಟಗೀಡು ಮಾಡಿದೆ ಎಂದು ಶಿವಸೇನೆ ಹೇಳಿದೆ.

ನರೇಂದ್ರ ಮೋದಿ ಪರವಾಗಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಗೆ ಕೇಳಲು ಇಚ್ಚಿಸುತ್ತೇವೆ. ಮಹಿಳೆಯರ ಕಷ್ಟವನ್ನು ಅರ್ಥ ಮಾಡಿಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಇಂತಹ ನಿಷ್ಕರುಣಿ, ಜಾಣ ಕಿವುಡ ಸರ್ಕಾರವನ್ನು ಕಳೆದ 10 ವರ್ಷಗಳಲ್ಲಿ ನೋಡಿಯೇ ಇಲ್ಲವೆಂದು ಶಿವಸೇನೆ ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆದುಕೊಂಡಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!