ಇದು ಆರಂಭವಷ್ಟೇ: ರಾಹುಲ್ ಕೊಂಡಾಡಿದ ಶಿವಸೇನೆ!

Published : Jul 21, 2018, 01:14 PM IST
ಇದು ಆರಂಭವಷ್ಟೇ: ರಾಹುಲ್ ಕೊಂಡಾಡಿದ ಶಿವಸೇನೆ!

ಸಾರಾಂಶ

ರಾಹುಲ್ ಭಾಷಣ ಕೊಂಡಾಡಿದ ಶಿವಸೇನೆ ರಾಹುಲ್ ಗಾಂಧಿ ರಾಜಕೀಯ ಗ್ರಾಫ್ ಏರಿದೆ ರಾಹುಲ್ ಭಾಷಣವನ್ನು ಅದ್ಭುತ ಎಂದ ರಾವತ್ ರಾಹುಲ್ ಅಪ್ಪುಗೆ ಜನತಂತ್ರದ ವಿಜಯ

ನವದೆಹಲಿ(ಜು.21): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಿನ್ನೆ ಲೋಕಸಭೆಯಲ್ಲಿ ಮಾಡಿದ ಭಾಷಣವನ್ನು ಎನ್ ಡಿಎ ಅಂಗಪಕ್ಷ ಶಿವಸೇನೆ ಕೊಂಡಾಡಿದೆ. ರಾಹುಲ್ ಭಾಷಣವನ್ನು ‘ಇದೊಂದು ಆರಂಭವಷ್ಟೇ’ ಎಂದು ಬಣ್ಣಿಸಿರುವ ಶಿವಸೇನೆ, ರಾಹುಲ್ ಅವರ ರಾಜಕೀಯ ಗ್ರಾಫ್ ಏರುತ್ತಿದೆ ಎಂದು ಹೇಳಿದೆ.

ಈ ಕುರಿತು ಮಾತನಾಡಿರುವ ಶಿವಸೇನೆ ಮುಖಂಡ ಸಂಜಯ್ ರಾವತ್, ರಾಹುಲ್ ಅವರ ನಿನ್ನೆಯ ಭಾಷಣ ನಿಜಕ್ಕೂ ಅದ್ಭುತವಾಗಿತ್ತು ಎಂದು ಹೇಳಿದ್ದಾರೆ. ತಮ್ಮ ಭಾಷಣದಲ್ಲಿ ರಾಹುಲ್ ಪ್ರಸ್ತಾಪಸಿದ ಅಂಶಗಳು ಖಂಡಿತ ದೇಸದ ಜನರನ್ನು ಮುಟ್ಟಿವೆ ಎಂದು ರಾವತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಹುಲ್ ರಾಜಕೀಯವಾಗಿ ಪಳಗುತ್ತಿದ್ದು, ಇದು ಅಧಿಕಾರದಲ್ಲಿರುವವರ ನಿದ್ದೆಗೆಡಿಸಿರುವುದು ಸುಳ್ಳಲ್ಲ ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಭಾಷಣದ ಬಳಿಕ ರಾಹುಲ್ ಪ್ರಧಾನಿ ಅವರನ್ನು ಅಪ್ಪಿಕೊಂಡಿರುವುದು ಜನತಂತ್ರದ ವಿಜಯ್ ಎಂದು ಬಣ್ಣಿಸಿರುವ ಅವರು, ರಾಹುಲ್ ಅಪ್ಪುಗೆಯ ಬಳಿಕ ಮೋದಿ ಆಘಾತದಲ್ಲಿದ್ದರು ಎಂದು ಹೇಳಿದ್ದಾರೆ.

ಇದೇ ವೇಳೆ ನಿನ್ನೆಯ ಅವಿಶ್ವಾಸ ನಿರ್ಣಯ ಮಂಡನೆ ಗೊತ್ತುವಳಿ ಚರ್ಚೆ ಸಂದರ್ಭದಲ್ಲಿ ಶಿವಸೇನೆ ಸದಸನಕ್ಕೆ ಗೈರಾಗಿರುವುದನ್ನು ಸಂಜಯ್ ರಾವತ್ ಸಮರ್ಥಿಸಿಕೊಂಡಿದ್ದಾರೆ. ಈ ವಿಷಯದಲ್ಲಿ ಶಿವಸೇನೆಯ ನಿಲುವು ತುಂಬ ಸ್ಪಷ್ಟವಾಗಿದೆ ಎಂದೂ ಅವರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಠಿಣ 9 ಷರತ್ತುಗಳೊಂದಿಗೆ 22 ಹಿಂದುಳಿದ, ದಲಿತ ಮಠ, ಟ್ರಸ್ಟ್‌, ಸಂಘಗಳಿಗೆ 53 ಎಕ್ರೆ ಭೂಮಿ ಮಂಜೂರು
ಸಂತೋಷ್ ಲಾಡ್-ಜಕ್ಕಪ್ಪನವರ ಜಟಾಪಟಿ; ಕೊನೆಗೂ ಪತ್ತೆಯಾಯ್ತು ನಿಗೂಢ 120 ಎಕರೆ ಜಮೀನು