
ನವದೆಹಲಿ: ಮುಂದಿನ ವರ್ಷ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಹೊಸ ಪಕ್ಷಗಳ ಉದಯ ಆರಂಭವಾಗಿದೆ. ಈಗಾಗಲೇ ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದ ಜೆಡಿಯುವಿನಿಂದ ವಿಭಜನೆಗೊಂಡು ಬಂಡಾಯ ಘೋಷಿಸಿದ್ದ ಶರದ್ ಯಾದವ್ ಬಣ ಗುರುವಾರ ಹೊಸ ಪಕ್ಷ ‘ಲೋಕತಾಂತ್ರಿಕ್ ಜನತಾ ದಳ’ (ಎಲ್ಜೆಡಿ) ರಚನೆಯ ಬಗ್ಗೆ ಘೋಷಿಸಿದೆ.
ಪತ್ರಿಕಾಗೋಷ್ಠಿಯೊಂದರಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸುಶೀಲಾ ಮೊರಾಲೆ, ನೂತನ ಪಕ್ಷ ರಚನೆಯ ಬಗ್ಗೆ ಘೋಷಿಸಿದರು.
ಈ ವೇಳೆ ಯಾದವ್ ಉಪಸ್ಥಿತರಿದ್ದರೂ, ತಾವಿನ್ನೂ ಹೊಸ ಪಕ್ಷದ ಸದಸ್ಯರಾಗಿಲ್ಲ ಎಂದು ಪ್ರತಿಪಾದಿಸಿದರು. ಆದರೆ ಎಲ್ಜೆಡಿಗೆ ತಮ್ಮ ಆಶೀರ್ವಾದ ಇದೆ ಎಂದು ಅವರು ತಿಳಿಸಿದರು. ಜೆಡಿಯು ಪ್ರತಿನಿಧಿತ್ವದ ಕುರಿತಂತೆ ಇನ್ನೂ ಕಾನೂನು ಹೋರಾಟ ಮುಂದುವರಿದಿರುವುದರಿಂದ ಅವರು ಈ ರೀತಿ ಹೇಳಿರಬಹುದು ಎನ್ನಲಾಗಿದೆ. ಮೇ 18ರಂದು ಹೊಸ ಪಕ್ಷದ ರಾಷ್ಟ್ರೀಯ ಸಮಾವೇಶ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ