ಕರೆಯದಿದ್ರೂ ಇಡಿ ವಿಚಾರಣೆಗೆ ಹೊರಟ ಪವಾರ್, ಬಳಿಕ ವಾಪಾಸ್!

Published : Sep 28, 2019, 10:14 AM IST
ಕರೆಯದಿದ್ರೂ ಇಡಿ ವಿಚಾರಣೆಗೆ ಹೊರಟ ಪವಾರ್, ಬಳಿಕ ವಾಪಾಸ್!

ಸಾರಾಂಶ

ಸೂಚಿಸದಿದ್ರೂ ಇ.ಡಿ. ಕಚೇರಿಗೆ ಹೊರಟು ಕಡೆಗೆ ಹಿಂದೆ ಸರಿದ ಪವಾರ್‌!| ನಿಮ್ಮ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದ ಜಾರಿ ನಿರ್ದೇಶನಾಲಯ

ಮುಂಬೈ[ಸೆ.28]: ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ 25 ಸಾವಿರ ಕೋಟಿ ರು. ಹಗರಣ ಸಂಬಂಧ ತಮ್ಮ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಪಿ ನಾಯಕ ಶರದ್‌ ಪವಾರ್‌, ಜಾರಿ ನಿರ್ದೇಶನಾಲಯ ಸೂಚನೆ ನೀಡದ ಹೊರತಾಗಿಯೂ ಸಂಸ್ಥೆಯ ಕಚೇರಿಗೆ ಸ್ವಯಂ ಭೇಟಿ ನೀಡುವ ನಿರ್ಧಾರವನ್ನು ಶುಕ್ರವಾರ ಕೈಗೊಂಡಿದ್ದರು.

‘ಪಾಕಿಸ್ತಾನಿಯರ ವಿರುದ್ಧ ಷಡ್ಯಂತ್ರ: 370 ರದ್ದತಿಯೊಂದು ಕುತಂತ್ರ’!

ಆದರೆ ಇಂಥ ಬೆಳವಣಿಗೆ ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗಬಹುದು ಎಂದು ಪೊಲೀಸರ ಮನವಿ ಅನ್ವಯ, ಅಂತಿಮ ಹಂತದಲ್ಲಿ ಇಡಿ ಕಚೇರಿಗೆ ಭೇಟಿ ನೀಡುವ ನಿರ್ಧಾರದಿಂದ ಹಿಂದಕ್ಕೆ ಸರಿದರು.

ಪರ್ರಿಕರ್ ರಕ್ಷಣಾ ಖಾತೆ ತೊರೆದಿದ್ದೇಕೆ? ಪವಾರ್ ಹೇಳಿದ್ದೇನು?

ಈ ನಡುವೆ ಜಾರಿ ನಿರ್ದೇಶನಾಲಯ ಕೂಡ ಶರದ್‌ ಪವಾರ್‌ಗೆ ಇ- ಮೇಲ್‌ವೊಂದನ್ನು ಕಳುಹಿಸಿ ಸದ್ಯ ನಿಮ್ಮ ವಿಚಾರಣೆ ನಡೆಸುವ ಅಗತ್ಯವಿಲ್ಲ. ವಿಚಾರಣೆ ಅಗತ್ಯಬಿದ್ದರೆ ತಿಳಿಸುತ್ತೇವೆ ಎಂದು ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ