ಮೈತ್ರಿ ಪಕ್ಷದ ಅಭದ್ರತೆ ಬಗ್ಗೆ ಸುಳಿವು ನೀಡಿದ ಕಾಂಗ್ರೆಸ್ ನಾಯಕ ಶಾಮನೂರು ?

Published : May 25, 2019, 11:55 AM IST
ಮೈತ್ರಿ ಪಕ್ಷದ ಅಭದ್ರತೆ ಬಗ್ಗೆ ಸುಳಿವು ನೀಡಿದ ಕಾಂಗ್ರೆಸ್ ನಾಯಕ ಶಾಮನೂರು ?

ಸಾರಾಂಶ

ಲೋಕಸಭಾ ಚುನಾವನೆ ಮುಕ್ತಾಯವಾಗಿದ್ದು, ಇದೀಗ ಕಾಂಗ್ರೆಸ್ ನಾಯಕರಲ್ಲಿ ಓರ್ವರು ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಮಾತಾಡಿದ್ದಾರೆ. 

ದಾವ​ಣ​ಗೆರೆ :  ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿದ ಬೆನ್ನಲ್ಲೇ ರಾಜ್ಯದಲ್ಲಿನ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ಉಳಿವಿನ ಕುರಿತು ಚರ್ಚೆಗಳು ಗರಿಗೆದರಿರುವ ಬೆನ್ನಲ್ಲೇ, ಮೈತ್ರಿ ಸರ್ಕಾ​ರ​ದಲ್ಲಿ ಅದೇ​ನಾ​ಗು​ತ್ತದೆ ಅನ್ನೋದು ಇವತ್ತೋ ಅಥವಾ ನಾಳೆಯೋ ಗೊತ್ತಾ​ಗ​ಲಿದೆ ಎಂದು ಹಿರಿಯ ಕಾಂಗ್ರೆಸ್ಸಿಗ ಡಾ.ಶಾಮನೂರು ಶಿವಶಂಕರಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗ​ರ​ದಲ್ಲಿ ಶುಕ್ರ​ವಾ​ರ ಸುದ್ದಿ​ಗಾ​ರರೊಂದಿಗೆ ಮಾತನಾಡಿದ ಅವರು, ಲೋಕ​ಸಭೆ ಚುನಾ​ವ​ಣೆ​ಯಲ್ಲಿ ಜನತೆ ಆದೇಶ ಮಾಡಿ​ದ್ದಾ​ಗಿದೆ. ಅದನ್ನು ಎಲ್ಲರೂ ಒಪ್ಪ​ಬೇಕು, ಪಾಲ​ನೆ ಮಾಡ​ಬೇ​ಕಷ್ಟೆ. ಚುನಾ​ವಣೆ ಫಲಿ​ತಾಂಶದ ಹಿನ್ನೆ​ಲೆ​ಯಲ್ಲಿ ಮೈತ್ರಿ ಸರ್ಕಾ​ರದ ಭವಿಷ್ಯವು ಏನಾ​ಗು​ತ್ತ​ದೆಂಬುದೂ ಇವತ್ತೋ, ನಾಳೆಯೋ ಗೊತ್ತಾ​ಗು​ತ್ತದೆ. ಮೈತ್ರಿ ಕೂಟ​ದಲ್ಲಿ ಏನಾ​ಗು​ತ್ತದೋ ನೋಡೋಣ ಎನ್ನುವ ಮೂಲಕ ಮೈತ್ರಿ ಸರ್ಕಾರ ಸುಭದ್ರವಾಗಿಲ್ಲ ಎಂಬ ಪರೋಕ್ಷ ಸುಳಿವು ನೀಡಿದ್ದಾರೆ.

ಕಾಂಗ್ರೆ​ಸ್ಸಿಗೆ ಒಂದೇ ಸ್ಥಾನ ಬಂದಿ​ರುವುದು ಜನಾ​ದೇಶ. ಅದನ್ನು ನಾವು ಪಾಲಿ​ಸ​ಬೇ​ಕಾ​ಗು​ತ್ತದೆ ಎಂದ ಶಾಮ​ನೂರು ಶಿವ​ಶಂಕ​ರಪ್ಪ, ಸಿದ್ದ​ರಾ​ಮ​ಯ್ಯ​ ಬಗ್ಗೆ ನಾನು ಮಾತ​ನಾ​ಡು​ವು​ದಿಲ್ಲ. ನೀವೇ ಸಿದ್ದ​ರಾ​ಮ​ಯ್ಯನಿಗೆ ಕೇಳಿ ಎನ್ನುತ್ತಾ ತಮ್ಮ ವಾಹ​ನವೇರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್