
ಬೆಂಗಳೂರು(ಡಿ.14): ಕಳೆದ ಮೂರು ದಿಗಳಿಂದ ರಾಜ್ಯಾದ್ಯಂತ ಭಾರೀ ಚರ್ಚೆಗೊಳಗಾಗಿದ್ದ ಅಬಕಾರಿ ಸಚಿವರ ರಾಸಲೀಲೆ ಸಿಡಿ ವಿಚಾರದ ಕುರಿತಾಗಿ ಇದೀಗ ಮತ್ತೊಂದು ಬಹುದೊಡ್ಡ ಬೆಳವಣಿಗೆ ಕಂಡು ಬಂದಿದೆ.
ಸಚಿವ ಮೇಟಿಯ ರಾಸಲೀಲೆ ವಿಚಾರವಾಗಿ ಹೇಳಿಕೆಗಳು ದಿನದಿಂದ ದಿನಕ್ಕೆ ಬದಲಾಗುತ್ತಿದ್ದವು. ಆದರೀಗ RTI ಕಾರ್ಯಕರ್ತ ರಾಜಶೇಖರ್ ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಮೇಟಿಯ ರಾಸಲೀಲೆಯ ಸಿಡಿಯನ್ನು ಬಿಡುಗಡೆ ಮಾಡಿದ್ದಾರೆ.36 ನಿಮಿಷ 10 ಸೆಕೆಂಡ್'ನ ಈ ರಾಸಲೀಲೆಯ ವಿಡಿಯೋದಲ್ಲಿ ಮಹಿಳೆಯ ಧ್ವನಿ ಅಸ್ಪಷ್ಟವಾಗಿದೆ.
ದೆಹಲಿಯಲ್ಲಿ RTI ಕಾರ್ಯಕರ್ತ ಬಿಡುಗಡೆ ಮಾಡಿರುವ ಈ ವಿಡಿಯೋ ಇದೀಗ ಮಾಧ್ಯಮಗಳ ಕೈ ಸೇರಿದೆ. ಮಾಧ್ಯಮಗಳು ಈ ರಾಸಲೀಲೆಯ ವಿಡಿಯೋವನ್ನು ಪ್ರಸಾರ ಮಾಡಿದ ಮರು ಕ್ಷಣವೇ ಅಬಕಾರಿ ಸಚಿವ ಮೇಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.