ನೀರಿಲ್ಲದ ಒಣಗಿದೆ ಚಿಕ್ಕೋಡಿ, ದಾವಣೆಗೆರೆ-ಭೀಕರ ಬರಗಾಲಕ್ಕೆ ತತ್ತರಿಸಿದ ಕರ್ನಾಟಕ!

By Web DeskFirst Published May 8, 2019, 9:30 PM IST
Highlights

ದೇಶದಲ್ಲೀಗ ಲೋಕಸಭಾ ಚುನಾವಣಾ ಕಾವು ಜೋರಾಗಿದೆ. ಆದರೆ ಕರ್ನಾಟಕದಲ್ಲಿ ಭೀಕರ ಬರಗಾಲಕ್ಕೆ ಜನ, ಜಾನುವಾರು ಸೇರಿದಂತೆ ಇಡೀ ಸಂಕುಲವೇ ತತ್ತರಿಸಿದೆ. 

ಕರ್ನಾಟಕದ ಬಹುತೇಕ ಜಿಲ್ಲೆಗಳು ಭೀಕರ ಬರಗಾಲಕ್ಕೆ ತತ್ತರಿಸಿದೆ. ನದಿ, ಜಲಾಶಗಳು ಬತ್ತಿ ಹೋಗಿದೆ. ಕುಡಿಯಲು ನೀರು ಇಲ್ಲದಾಗಿದೆ. ಚಿಕ್ಕೋಡಿ-ದಾವಣೆಗೆರೆಯ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಉತ್ತರ ಕರ್ನಾಟಕದ ಜೀವ ನದಿ ಕೃಷ್ಣಾ ನೀರಿಲ್ಲದೆ ಬತ್ತಿ ಹೋಗಿದೆ. ಹೀಗಾಗಿ ಚಿಕ್ಕೋಡಿಯ ಬೆಳೆಗಳು ಒಣಗಿ ಹೋಗಿದೆ. ಹೀಗಾಗಿ ಇಲ್ಲಿನ ಜನರಿಗೆ ಕೆಲಸವೂ ಇಲ್ಲ, ಒಪ್ಪೊತ್ತಿನ ಊಟವೂ ಇಲ್ಲ, ಕುಡಿಯಲು ನೀರೂ ಕೂಡ ಇಲ್ಲ.

"

ನೀರಿಗಾಗಿ ಅಲೆದಾಟ ಶುರುವಾಗಿದೆ. ಇದೀಗ ಒಂದು ಹೊತ್ತಿನ ಊಟಕ್ಕಾಗಿ ಇದೀಗ ನದಿಯಲ್ಲಿನ ಒಡಲು ಅಗೆದು ತುತ್ತು ಅನ್ನಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಇತ್ತ ದಾವಣೆಗೆರೆಯಲ್ಲೂ ನೀರಿಗಾಗಿ ಹಾಹಾಕಾರ ಎದ್ದಿದೆ. 

click me!