
ನವದೆಹಲಿ (ಡಿ.15): ಕಪ್ಪುಹಣದ ವಿರುದ್ಧ ಸಮರ ನಡೆಸುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘಿಸುತ್ತಾ, ಜಾರಿ ನಿರ್ದೇಶನಾಲಯವು ಅಕ್ರಮವಾಗಿ ಶೇಖರಣೆಯಾಗಿರುವ ಹಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಹಣವನ್ನು ಮತ್ತೆ
ಚಲಾವಣೆಗೆ ಬಿಡಲಾಗುತ್ತದೆ. ನೀವಿದನ್ನು 'ಸರ್ಜಿಕಲ್ ಆ್ಯಕ್ಷನ್' ಎಂದು ಕರೆಯಬಹುದು ಎಂದು ಆರ್ಥಿಕ ವ್ಯವಹಾರ ಕಾರ್ಯದರ್ಶಿ ಶಕ್ತಿಕಾಂತ್ ಹೇಳಿದ್ದಾರೆ.
ಮಾರುಕಟ್ಟೆಯಲ್ಲಿರುವ ನಕಲಿ ನೋಟುಗಳ ಬಗ್ಗೆ ಮಾತನಾಡುತ್ತಾ, ಹೊಸ 500 ಹಾಗೂ 2000 ದ ನೋಟುಗಳನ್ನು ನಕಲಿ ಮಾಡುವ ಸಾಧ್ಯತೆ ಕಡಿಮೆ. ಭದ್ರತಾ ಹಿತದೃಷ್ಟಿಯಿಟ್ಟುಕೊಂಡು ಮೊದಲ ಬಾರಿಗೆ ದೇಶಿಯವಾಗಿ ನೋಟುಗಳಿಗೆ ವಿನ್ಯಾಸ
ಮಾಡಲಾಗಿದೆ. ನೋಟುಗಳು ಹೆಚ್ಚು ಭದ್ರವಾಗಿದ್ದು ನಕಲಿ ಮಾಡುವ ಸಾಧ್ಯತೆ ತೀರಾ ಕಡಿಮೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಪ್ರಸ್ತುತ 500 ರ ಹೊಸ ನೋಟುಗಳನ್ನು ಮುದ್ರಿಸುವುದಕ್ಕೆ ಹೆಚ್ಚು ಗಮನ ಹರಿಸುತ್ತಿದ್ದೇವೆ ಎಂದು ದಾಸ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.