
ನವದೆಹಲಿ(ಅ.10): ಅಕ್ಟೋಬರ್ 15ಕ್ಕೆ ಪ್ರಳಯ ಫಿಕ್ಸ್ ಆಗಿದೆ. ಯಾರ್ ಬಂದ್ರೂ ಭೂಮಿ ಉಯಳಿಯೋದಿಲ್ಲ ನಿಬಿರು ಎನ್ನುವ ಗ್ರಹ ಬಂದು ಭೂಮಿಯನ್ನ ಛಿದ್ರ ಛಿದ್ರ ಮಾಡುತ್ತೆ. ಹೀಗಂತ ಹೇಳಿದ್ದು, ಒಬ್ಬ ಸೈಂಟಿಸ್ಟ್. ಆ ಸೈಂಟಿಸ್ಟ್ ಹಿಂದಿನ ಅಸಲೀತನ ಹುಡುಕ್ತಾ ಹೋದರೆ, ನಿಜಕ್ಕೂ ಪ್ರಳಯಕ್ಕಿಂತಲೂ ಭಯಾನಕವಾದ ಸುದ್ದಿ ಹೊರ ಬೀಳುತ್ತದೆ.
ಇದೇ ಥರ ಅಕ್ಟೋಬರ್ 15ಕ್ಕೆ ಭೂಮಿಗೆ ಬಂದು ನಿಬಿರು ಅನ್ನೋ ಕ್ಷುದ್ರ ಗ್ರಹ ಅಪ್ಪಳಿಸುತ್ತೆ. ಆಗ ಇಡೀ ಭೂಮಿಯೇ ಛಿದ್ರ ಛಿದ್ರವಾಗುತ್ತಂತೆ. ಇನ್ನೇನು ಜಸ್ಟ್ ಐದೇ ದಿನ ಅಷ್ಟೇ. ಆರನೇ ದಿನ ಈ ಭೂಮಿನೇ ಉಳಿಯೋದಿಲ್ಲ. ಇಡೀ ಭೂಮಂಡಲವೇ ನಾಶವಾಗುತ್ತೆ ಅಂತ ವಿಜ್ಞಾನಿಯೊಬ್ಬ ಭವಿಷ್ಯ ನುಡಿದಿದ್ದಾನೆ. ಆ ವಿಜ್ಞಾನಿ ಯಾರು ಗೊತ್ತಾ? ಇಲ್ಲಿದ್ದಾನೆ ನೋಡಿ.
ಡೇವಿಡ್ ಮೇಡ್ ಎನ್ನುವ ವಿಜ್ಞಾನಿ ಇನ್ನೈದು ದಿನ ಗಳಲ್ಲಿ ಭೂಮಿಗೆ ನಿಬಿರು ಅಪ್ಪಳಿಸುತ್ತೆ. ಭೂಮಿ ನಾಶವಾಗುತ್ತೆ ಅಂತ ಹೇಳಿದ್ದಾರೆ. ಆದರೆ ಈತ ಸೈಂಟಿಸ್ಟೂ ಅಲ್ಲ, ಅತ್ತ ಜ್ಯೋತಿಷಿನೂ ಅಲ್ಲ. ತನ್ನನ್ನ ತಾನು ಸಂಶೋಧಕ ಅಂತ ಹೇಳಿಕೊಳ್ಳೋ ಈ ಎಡಬಿಡಂಗಿ. ಪ್ಲಾನೆಟ್ ಎಕ್ಸ್ ಅನ್ನೋ ವೆಬ್'ಸೈಟ್ನಲ್ಲಿ ಪ್ರಳಯದ ಬಗ್ಗೆ ಭೀತಿ ಹುಟ್ಟಿಸಲಾಗ್ತಿದೆ. ಆದರಿದು ಡೋಂಗಿ ವೆಬ್'ಸೈಟ್ ಪ್ರಚಾರಕ್ಕೆ ಪೂರಕವಾಗ್ತಿದೆಯೇ ಹೊರತು, ಪ್ರಳಯ ಆಗೋ ವಿಚಾರಾನೇ ಇಲ್ಲಿಲ್ಲ.
ಹೀಗಾಗಿ ಈ ಡೋಂಗಿ ಸೈಂಟಿಸ್ಟ್ ಹೇಳಿದ ಮಾತಿಗೆ ಜನ ಆತಂಕಪಡುವ ಅಗತ್ಯವಿಲ್ಲ ಯಾಕಂದ್ರೆ ಪ್ರಳಯ ಆಗೋದೇ ಇಲ್ಲ ಸೋ ಡೋಂಟ್ ವರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.