ಬಿಜೆಪಿ ವಕ್ತಾರನನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

Published : Dec 16, 2016, 11:36 AM ISTUpdated : Apr 11, 2018, 12:44 PM IST
ಬಿಜೆಪಿ ವಕ್ತಾರನನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

ಸಾರಾಂಶ

ಇದು ಬಿಜೆಪಿ ನಿಮಗೆ ಕೊಟ್ಟಿರುವ ಕೆಲಸವೋ? ಕೋರ್ಟ್’ನಲ್ಲಿ ಪಕ್ಷದ ಕೆಲಸಗಳನ್ನು ಮಾಡಲು ಬಿಜೆಪಿ ನಿಮಗೆ ಹಣ ಕೊಡುತ್ತದೋ? ಎಂದು ಸುಪ್ರೀಂ ಕೋರ್ಟ್ ಅರ್ಜಿದಾರನನ್ನು ಕೇಳಿದೆ.

ನವದೆಹಲಿ (ಡಿ.16):  ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸುವ  ಬಿಜೆಪಿ ವಕ್ತಾರನನ್ನು ಸುಪ್ರೀಂ ಕೋರ್ಟ್ ತರಾಟೆಗೆ  ತೆಗೆದು ಕೊಂಡ ಘಟನೆ ಇಂದು ನಡೆದಿದೆ.

ನ್ಯಾಯಾಲಯದಲ್ಲಿ ರಾಜಕೀಯ ಚಟುವಟಿಕೆ ನಡೆಸಲು ನಿಮಗೆ ನಿಮ್ಮ ಪಕ್ಷ ಹಣ ನೀಡುತ್ತದೆಯೋ? ಎಂದು ನಾಲ್ಕು ಪಿಐಎಲ್’ಗಳನ್ನು ಸಲ್ಲಿಸಿದ್ದ ದೆಹಲಿಯ ಬಿಜೆಪಿ ವಕ್ತಾರನಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.

ಇದು ಬಿಜೆಪಿ ನಿಮಗೆ ಕೊಟ್ಟಿರುವ ಕೆಲಸವೋ? ಕೋರ್ಟ್’ನಲ್ಲಿ ಪಕ್ಷದ ಕೆಲಸಗಳನ್ನು ಮಾಡಲು ಬಿಜೆಪಿ ನಿಮಗೆ ಹಣ ಕೊಡುತ್ತದೋ? ಎಂದು ಸುಪ್ರೀಂ ಕೋರ್ಟ್ ಅರ್ಜಿದಾರನನ್ನು ಕೇಳಿದೆ.

ನೀವು ವೃತ್ತಿಪರ ಪಿಐಎಲ್ ಕಾರ್ಯಕರ್ತನಾಗಿದ್ದೀರಿ, ಪ್ರತಿ ದಿನ ಪಿಐಎಲ್ ಸಲ್ಲಿಸುತ್ತೀರಿ. ನಿಮ್ಮ ಪಕ್ಷವೇ ಅಧಿಕಾರದಲ್ಲಿದೆ, ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರವನ್ನು ಏಕೆ ಸಂಪರ್ಕಿಸಬಾರದು ಎಂದು ಕೋರ್ಟ್ ಕೇಳಿದೆ.

ನ್ಯಾಯಾಲಯಗಳಲ್ಲಿ ರಾಜಕೀಯ ಚಟುವಟಿಕೆಗಳನ್ನು ನಡೆಸುವುದನ್ನು ಆಕ್ಷೇಪಿಸಿದ ಸುಪ್ರೀಂ ಕೋರ್ಟ್, ರಾಜಕೀಯ ಕಾರ್ಯಕರ್ತ ರಾಜಕೀಯ ಲಾಭಕ್ಕಾಗಿ  ನ್ಯಾಯಾಲಯಗಳನ್ನು ಬಳಸುವುದನ್ನು ಪ್ರೋತ್ಸಾಹಿಸಲಾಗದು ಎಂದಿದೆ ಹಾಗೂ ಅರ್ಜಿಯನ್ನು ವಜಾಗೊಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಾವುದೇ ಕ್ಷಣದಲ್ಲಾದರೂ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಉದಯ ಕದಲೂರು ಓಪನ್ ಹೇಳಿಕೆ
ಸಿಲ್ಕ್ ಬೋರ್ಡ್- ಕೆ.ಆರ್ ಪುರ ಮೆಟ್ರೋ ನಿಲ್ದಾಣದವರೆಗೂ ಹೈಟೆಕ್ ಹೊರವರ್ತುಲ ರಸ್ತೆ ಅಭಿವೃದ್ಧಿಗಾಗಿ ₹307 ಕೋಟಿ ಅನುಮೋದನೆ