
ನವದೆಹಲಿ(ಜೂ.11): ಮಹಾಭಾರತದಲ್ಲಿ ಕೌರವರೊಂದಿಗೆ ಕವಡೆಯಾಟದಲ್ಲಿ ಸೋತ ಪಾಂಡವರು ಹೇಗೆ ತಮ್ಮ ಪತ್ನಿ ದ್ರೌಪದಿಯನ್ನು ಕಳೆದುಕೊಂಡರು ಎಂಬ ಕತೆ ಎಲ್ಲರಿಗೂ ತಿಳಿದಿರುವಂತಹುದ್ದೇ. ಇದೀಗ ಇಂತಹುದೇ ಘಟನೆ ಸೌದಿ ಅರೇಬಿಯಾದಲ್ಲೂ ನಡೆದಿದೆ. ಇಲ್ಲಿನ ರಾಜಕುಮಾರ ಅಬ್ದುಲ್ಲಾಹ್ ಬಿನ್ ಅಬ್ದುಲ್ ಅಜೀಜ್ ಜೂಜಾಟದಲ್ಲಿ ತಮ್ಮ ಐವರು ಪತ್ನಿಯನ್ನು ಕಳೆದುಕೊಂಡಿದ್ದಾರೆ. ಅಲ್ಲದೇ 6 ಗಂಟೆಯ ನಡೆದ ಈ ಜೂಜಾಟದಲ್ಲಿ ಅವರು ಅಪಾರ ಪ್ರಮಾಣದ ನಗದು ಹಣವನ್ನೂ ಕಳೆದುಕೊಂಡಿರುವುದಾಗಿ ತಿಳಿದು ಬಂದಿದೆ.
ಸೌದಿ ಅರೇಬಿಯಾದ ರಾಜಕುಮಾರ ಅಬ್ದುಲ್ಲಾಹ್ ಬಿನ್ ಅಬ್ದುಲ್ ಅಜೀಜ್ ಡ್ರಗ್ಸ್, ಜೂಜಾಟ ಹಾಗೂ ತನ್ನ ಐಷಾರಾಮಿ ಜೀವನಕ್ಕಾಗಿ ವಿಶ್ವದಾದ್ಯಂತ ಫೇಮಸ್ ಆಗಿದ್ದರು. ಇದೀಗ ಇದೇ ಜೂಜಾಟದ ಹುಚ್ಚಿನಿಂದಾಗಿ ತನ್ನನ್ನು ನಂಬಿಕೊಂಡಿದ್ದ ಪತ್ನಿಯನರನ್ನೂ ಅಡವಿಟ್ಟು ಕಳೆದುಕೊಂಡಿದ್ದಾರೆ. ಮಾಧ್ಯಮಗಳು ಈ ಕುರಿತಾಗಿ ವರದಿ ಮಾಡಿದ್ದು 'ಕೆಲ ದಿನಗಳ ಹಿಂದೆಡ ರಾಜಕುಮಾರ ಮಾಜಿದ್ ಸಿಮ್ರ್'ನ ಸಿನಯೀ ಗ್ರ್ಯಾಂಡ್ ಕಸೀನೋಗೆ ಪೋಕರ್ ಆಡುವ ಸಲುವಾಗಿ ತೆರಳಿದ್ದರು. ಇಲ್ಲಿ ಜೂಜಾಟ ಆರಂಭಿಸಿದ ರಾಜಕುಮಾರ ಒಂದಾದ ಬಳಿಕ ಮತ್ತೊಂದರಂತೆ ಪ್ರತಿಯೊಂದು ಆಟವನ್ನೂ ಸೋತರು. ನಗದು ಹಣ ಕಳೆದುಕೊಂಡರೂ ಸುಮ್ಮನಾಗದ ರಾಜಕುಮಾರ 160 ಕೋಟಿ ರೂಪಾಯಿಯ ಬದಲಾಗಿ ತಮ್ಮ ಐವರು ಪತ್ನಿಯರನ್ನೇ ಅಡವಿಟ್ಟಿದ್ದಾರೆ. ಬಳಿಕ ನಡೆದ ಆಟದಲ್ಲೂ ಸೋಲನುಭವಿಸಿದಾಗ ರಾಜಕುಮಾರ ಅಡವಿಟ್ಟ ಐವರು ಪತ್ನಿಯರನ್ನು ಬಿಡಿಸಿಕೊಳ್ಳಲಾಗದೇ ಅಲ್ಲೇ ಬಿಟ್ಟು ತೆರಳಿದ್ದಾರೆ' ಎಂದು ತಿಳಿಸಿವೆ.
ಈ ಮೊದಲೂ ಇಲ್ಲಿಗಾಗಮಿಸಿ ಜೂಜಾಟ ಆಡುವ ಜನರು ಹಣ ಇಲ್ಲದ ವೇಳೆ ತಮ್ಮ ಬಳಿ ಇದ್ದ ೊಂಟೆ ಹಾಗೂ ಕುದುರೆಗಳನ್ನು ಅಡವಿಟ್ಟು ಆಟ ಮುಂದುವರೆಸಿದ್ದ ಘಟನೆಗಳಿವೆ ಆದರೆಪತ್ನಿಯರನ್ನೇ ಅಡವಿಟ್ಟು ಆಡಿದ್ದು ಇದೇ ಮೊದಲ ಬಾರಿ ಎಂದು ಕಸೀನೋದ ಮ್ಯಾನೇಜರ್ ಮಾತುಗಳಿಂದ ತಿಳಿದು ಬಂದಿದೆ.
ಇನ್ನು ಇಲ್ಲಿನ ವಿದೇಶಾಂಗ ಸಚಿವರು ಈ ಕುರಿತಾಗಿ ಮಾತನಾಡಿದ್ದು 'ನಮ್ಮ ಸರ್ಕಾರ ಜೂಜಾಟದಲ್ಲಿ ಸೋಲನುಭವಿಸಿ ಅಲ್ಲೇ ಉಳಿದಿರುವ ರಾಜಕುಮಾರನ ಐವರು ಪತ್ನಿಯರನ್ನು ಶೀಘ್ರದಲ್ಲೇ ಮರಳಿ ಕರೆತರುವ ಕಾಯಕದಲ್ಲಿ ತೊಡಗಿದೆ. ಇದಕ್ಕಾಗಿ ರಾಜಕುಮಾರ ಪತ್ನಿಯರ ಮೇಲೆ ಹೂಡಿದ್ದ ಹಣವನ್ನು ನಾವೇ ಕೊಟ್ಟು ಅವರನ್ನು ಹಿಂದೆ ಕರೆತರುತ್ತೇವೆ' ಎಂದು ತಿಳಿಸಿದ್ದಾರೆ.
ಇನ್ನು ರಾಜಕುಮಾರನ ಈ ಕೃತ್ಯ ಅಲ್ಲಿನ ಸರ್ಕಾರವನ್ನು ತಲೆತಗ್ಗಿಸುವಂತೆ ಮಾಡಿದೆ. ಇನ್ನು ರಾಜಕುಮಾರನ ಪತ್ನಿಯರು ಮರಳಿ ಸೌದಿ ಅರೇಬಿಯಾಕ್ಕೆ ಬರುತ್ತಾರೆಯೇ ಎಂಬ ಕುರಿತಾಗಿಯೂ ಯಾವುದೇ ಸ್ಪಷ್ಟನೆ ದೊರಕಿಲ್ಲ. ಆದರೆ ಅಲ್ಲಿನ ಸರ್ಕಾರ ಐವರನ್ನು ಬಿಡಿಸಿ ತರುವ ಆಶ್ವಾಸನೆ ನೀಡಿದೆ. ಒಟ್ಟು 9 ಪತ್ನಿಯರನ್ನು ಹೊಂದಿರುವ ರಾಜಕುಮಾರ ಈ ಮೊದಲೂ ಹಲವಾರು ವಿವಾಗಳಲ್ಲಿ ಸಿಲುಕಿ ಚರ್ಚೆಗೀಡಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.