ಪರಪ್ಪನ ಅಗ್ರಹಾರಕ್ಕೆ ಶಶಿಕಲಾ ಆಗಮನ; ನ್ಯಾಯಾಧೀಶರಿಗೆ ಶರಣು

Published : Feb 15, 2017, 11:52 AM ISTUpdated : Apr 11, 2018, 01:03 PM IST
ಪರಪ್ಪನ ಅಗ್ರಹಾರಕ್ಕೆ ಶಶಿಕಲಾ ಆಗಮನ; ನ್ಯಾಯಾಧೀಶರಿಗೆ ಶರಣು

ಸಾರಾಂಶ

ಬೆಂಗಳೂರು (ಫೆ.15): ಪರಪ್ಪನ ಅಗ್ರಹಾರ ತಲುಪಿದ ಶಶಿಕಲಾ ನಟರಾಜನ್​ ವಿಶೇಷ ನ್ಯಾಯಾಲಯದ ಎದುರು ಶರಣಾಗಿದ್ದಾರೆ. ಶಶಿಕಲಾ ಜತೆ ಇಳವರಸಿ, ಸುಧಾಕರನ್​ ಸಹ ಕೋರ್ಟ್​ಗೆ ಶರಣಾಗಿದ್ದಾರೆ.

ಬೆಂಗಳೂರು (ಫೆ.15): ಪರಪ್ಪನ ಅಗ್ರಹಾರ ತಲುಪಿದ ಶಶಿಕಲಾ ನಟರಾಜನ್​ ವಿಶೇಷ ನ್ಯಾಯಾಲಯದ ಎದುರು ಶರಣಾಗಿದ್ದಾರೆ. ಶಶಿಕಲಾ ಜತೆ ಇಳವರಸಿ, ಸುಧಾಕರನ್​ ಸಹ ಕೋರ್ಟ್​ಗೆ ಶರಣಾಗಿದ್ದಾರೆ.

ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಜಡ್ಜ್​ ಅಶ್ವತ್ಥನಾರಾಯಣ ಎದುರು ಶಶಿಕಲಾ ಶರಣಾಗಿದ್ದು ಕೋರ್ಟ್​ ನಿಯಮಾವಳಿ ಪೂರೈಸಿದ ಬಳಿಕ ಜೈಲು ಪಾಲಾಗಲಿದ್ದಾರೆ.

ಈ ವೇಳೆ ನ್ಯಾಯಾಧೀಶರ ಬಳಿ ಅನಾರೋಗ್ಯದ ನೆಪ ಮುಂದಿಟ್ಟುಕೊಂಡು ಎರಡು ವಾರ ಕಾಲಾವಕಾಶ ಕೋರಲು ಶಶಿಕಲಾ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಕಾಲಾವಕಾಶ ನೀಡುವ ಸಾಧ್ಯತೆ ಇಲ್ಲ.

ಆಗ್ನೇಯ ವಿಭಾಗ ಡಿಸಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ ಜೈಲು ಸುತ್ತ ಬಿಗಿ ಭದ್ರತೆ ಒದಗಿಸಲಾಗಿದೆ. ಶಶಿಕಲಾ ಮತ್ತು ಇಳವರಸಿಗೆ ಮಹಿಳಾ ಕಾರಾಗೃಹದ ವಾರ್ಡ್ ನಲ್ಲಿ ಸಿದ್ಧತೆ ಪೂರ್ಣಗೊಂಡಿದೆ. ಮಾಜಿ ಸಿಎಂ ಜಯಲಲಿತಾ ಹಿಂದೊಮ್ಮೆ ಇದ್ದ ಕೊಠಡಿಯಲ್ಲೇ ಶಶಿಕಲಾರನ್ನು ಇಡುವ ಸಾಧ್ಯತೆಯಿದೆ. ಆದರೆ ವಿಶೇಷ ಭದ್ರತೆ ನೀಡಲಾಗುವುದಿಲ್ಲ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನೇಕಲ್‌ನಲ್ಲಿ ಭೀಕರ ಅಪಘಾತ; 20 ವಾಹನಕ್ಕೆ ಕಂಟೈನರ್ ಡಿಕ್ಕಿ, 2ಕ್ಕೂ ಹೆಚ್ಚು ಸಾವು, ಹಲವರು ಗಂಭೀರ
ಅಪ್ರಾಪ್ತರಿಂದ 8ನೇ ಕ್ಲಾಸ್ ಬಾಲಕಿಗೆ ಕಿರುಕುಳ: ನಾಲ್ವರು ಬಾಲಕರ ತಾಯಂದಿರನ್ನು ಬಂಧಿಸಿದ ಪೊಲೀಸರು