ಪೆರೋಲ್ ಅವಧಿ ಮುಗಿಯುವ ಮುನ್ನವೇ ಪರಪ್ಪನ ಅಗ್ರಹಾರಕ್ಕೆ ಶಶಿಕಲಾ ವಾಪಸ್

Published : Mar 31, 2018, 12:50 PM ISTUpdated : Apr 11, 2018, 12:51 PM IST
ಪೆರೋಲ್ ಅವಧಿ ಮುಗಿಯುವ ಮುನ್ನವೇ ಪರಪ್ಪನ ಅಗ್ರಹಾರಕ್ಕೆ ಶಶಿಕಲಾ ವಾಪಸ್

ಸಾರಾಂಶ

ಪೆರೋಲ್ ಅವಧಿ ಮುಗಿಯುವ ಮುನ್ನವೇ ಪರಪ್ಪನ ಅಗ್ರಹಾರ ಜೈಲಿನತ್ತ ಶಶಿಕಲಾ  ಮುಖ ಮಾಡಿದ್ದಾರೆ.  ಪತಿ ನಟರಾಜನ್ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇದೇ ತಿಂಗಳ 20 ರಂದು 15 ದಿನಗಳ ತುರ್ತು ಪೆರೋಲ್ ಮೇಲೆ ಶಶಿಕಲಾ ತೆರಳಿದ್ದರು.  

ಆನೇಕಲ್ (ಮಾ. 31): ಪೆರೋಲ್ ಅವಧಿ ಮುಗಿಯುವ ಮುನ್ನವೇ ಪರಪ್ಪನ ಅಗ್ರಹಾರ ಜೈಲಿನತ್ತ ಶಶಿಕಲಾ  ಮುಖ ಮಾಡಿದ್ದಾರೆ.  ಪತಿ ನಟರಾಜನ್ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇದೇ ತಿಂಗಳ 20 ರಂದು 15 ದಿನಗಳ ತುರ್ತು ಪೆರೋಲ್ ಮೇಲೆ ಶಶಿಕಲಾ ತೆರಳಿದ್ದರು.  

ಏಪ್ರಿಲ್‌ 3 ರ ವರೆಗೂ  ಶಶಿಕಲಾಗೆ ಪೆರೋಲ್ ಇದ್ದರೂ  ಇಂದು ಪರಪ್ಪನ ಅಗ್ರಹಾರ ಜೈಲಿಗೆ  ಚಿನ್ನಮ್ಮ ವಾಪಸ್ಸಾಗಲಿದ್ದಾರೆ.  ಪತಿ‌ ನಟರಾಜನ್ ಸಾವನ್ನಪ್ಪಿರುವುದರಿಂದ ಆಸ್ತಿ ಹಂಚಿಕೆ ಮಾಡುವಂತೆ ಸಂಬಂಧಿಕರು  ಒತ್ತಡ ಹೇರುತ್ತಿರುವುದರಿಂದ ಬೇಗನೆ ಜೈಲಿಗೆ ವಾಪಸ್ಸಾಗುತ್ತಿದ್ದಾರೆ ಎನ್ನಲಾಗಿದೆ.  

ಆಸ್ತಿ ಹಂಚಿಕೆ ವಿಚಾರದಲ್ಲಿ ಸಂಬಂಧಿಕರ ಒತ್ತಡ ಇರುವುದರಿಂದ ಮನೆಗಿಂತ ಜೈಲಿನಲ್ಲಿರುವುದೇ  ವಾಸಿ ಎಂದು ಪರಪ್ಪನ ಅಗ್ರಹಾರ ಜೈಲಿಗೆ ಇಂದೇ ವಾಪಸ್ಸಾಗುತ್ತಿದ್ದಾರೆ  ಶಶಿಕಲಾ.  ಇಂದು ಮುಂಜಾನೆ 8:50 ಚೆನ್ನೈ ನ ತಮ್ಮ ನಿವಾಸದಿಂದ ನೂರಾರು  ಬೆಂಬಲಿಗರೊಂದಿಗೆ ವಾಪಸ್  ಬರುತ್ತಿದ್ದಾರೆ.  ಇಂದು  ಸಂಜೆ 4 ಗಂಟೆ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲು ತಲುಪುವ ಸಾದ್ಯತೆ ಇದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು
ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!