
ಬೆಂಗಳೂರು (ಫೆ.22): ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾ ಪಕ್ಕದ ಸೆಲ್ ನಲ್ಲಿರುವ ಸರಣಿ ಹತ್ಯೆ ಕೈದಿ ಸೈನೆಡ್ ಮಲ್ಲಿಕಾರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿದೆ.
ಸೈನೆ ಮಲ್ಲಿಕಾ ಸರಣಿ ಹತ್ಯೆಗೈದ ದೇಶದ ಮೊದಲ ಮಹಿಳೆಯಾಗಿದ್ದು 6 ಮಂದಿ ಮಹಿಳೆಯನ್ನು ಹತ್ಯೆಗೈದಿದ್ದಾರೆ. ದೇವಸ್ಥಾನಕ್ಕೆ ಬರುವ ಶ್ರೀಮಂತ ಮಹಿಳೆಯರ ಗೆಳೆತನ ಮಾಡಿ ಅವರಲ್ಲಿರುವ ಚಿನ್ನಾಭರಣಗಳನ್ನು ದೋಚಿಕೊಂಡು ಬಳಿಕ ಸೈನೈಡ್ ನಿಂದ ಸಾಯಿಸುತ್ತಿದ್ದಳು. ಹಲವಾರು ಪ್ರಕರಣಗಳಲ್ಲಿ ಈಕೆ ಅಪರಾಧಿಯಾಗಿದ್ದು 2008 ರಲ್ಲಿ ಬಂಧಿಸಲಾಗಿತ್ತು.
ಮಲ್ಲಿಕಾ ಶಶಿಕಲಾ ಜೊತೆ ಗೆಳೆತನ ಹೊಂದಿದ್ದು, ಭದ್ರತೆ ಕಾರಣಕ್ಕಾಗಿ ಆಕೆಯನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ. ಊಟದ ಸಮಯದಲ್ಲಿ ಶಶಿಕಲಾಗೆ ಕ್ಯೂನಲ್ಲಿ ನಿಲ್ಲಲು ಬಿಡದೇ ಆಕೆಯೇ ಶಶಿಕಲಾಗೆ ಊಟ ತಂದು ಕೊಡುತ್ತಿದ್ದಳು ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.