
ಚೆನ್ನೈ(ಏ.26): ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಭಾವಚಿತ್ರವುಳ್ಳ ಬ್ಯಾನರ್'ಗಳನ್ನು ಚೆನ್ನೈ'ನ ಮುಖ್ಯ ಕಚೇರಿಯಿಂದ ತೆರವುಗೊಳಿಸಲಾಗಿದೆ. ಈ ನಡೆಯನ್ನು ಪನ್ನೀರ್'ಸೆಲ್ವಂ ಬಣ ಸಕಾರಾತ್ಮಕ ಹೆಜ್ಜೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.ಬ್ಯಾನರ್'ಗಳನ್ನು ತೆರವುಗೊಳಿಸಿರುವ ನಿರ್ಧಾರದಿಂದ ನಮಗೆ ಸಂತಸವಾಗಿದೆ' ಮುಂದಿನ ದಿನಗಳಲ್ಲಿ ಎರಡೂ ಬಣಗಳು ಒಂದುಗೂಡಲು ಈ ಕ್ರಮ ಉತ್ತಮ ಹೆಜ್ಜೆ ಎಂದು ಪನ್ನೀರ್ ಸೆಲ್ವಂ ಬಣದ ಮಾಧ್ಯಮ ಸಂಯೋಜಕರಾದ ಕೆ. ಸ್ವಾಮಿನಾಥನ್' ತಿಳಿಸಿದ್ದಾರೆ.
ಜಯಲಲಿತಾ ನಿಧನದ ನಂತರ ಪಳಿನಿಸ್ವಾಮಿ ಹಾಗೂ ಪನ್ನೀರ್'ಸ್ವಾಮಿ ಬಣಗಳ ನಡುವೆ ಭಿನ್ನಮತವುಂಟಾಗಿ ಪನ್ನೀರ್ ಗುಂಪಿನವರೆಲ್ಲರನ್ನು ಉಚ್ಚಾಟಿಸಲಾಗಿತ್ತು. ಸದ್ಯ ಶಶಿಕಲಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.