ಎಐಎಡಿಎಂಕೆಯಿಂದ ಶಶಿಕಲಾ ನಟರಾಜನ್ ಉಚ್ಚಾಟನೆ

Published : Feb 10, 2017, 03:32 AM ISTUpdated : Apr 11, 2018, 12:42 PM IST
ಎಐಎಡಿಎಂಕೆಯಿಂದ ಶಶಿಕಲಾ ನಟರಾಜನ್ ಉಚ್ಚಾಟನೆ

ಸಾರಾಂಶ

ಇಂದು ಬೆಳಿಗ್ಗೆ ಮಧುಸೂದನ್ ಅವರನ್ನು ವಿಕೆ ಶಶಿಕಲಾ ಅವರು ಉಚ್ಚಾಟನೆಗೊಳಿಸಿದ್ದರು.

ಚೆನ್ನೈ(ಫೆ.10): ತಮಿಳುನಾಡಿನಲ್ಲಿ ನಡೆಯುತ್ತಿರುವ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಎಐಎಡಿಎಂಕೆ ಪಕ್ಷದಿಂದ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಅವರನ್ನು ಪಕ್ಷದ ಅಧ್ಯಕ್ಷ  ಮಧುಸೂದನ್ ಅವರು ಉಚ್ಚಾಟನೆ ಮಾಡಿದ್ದಾರೆ. ಇಂದು ಬೆಳಿಗ್ಗೆ ಮಧುಸೂದನ್ ಅವರನ್ನು ವಿಕೆ ಶಶಿಕಲಾ ಅವರು ಉಚ್ಚಾಟನೆಗೊಳಿಸಿದ್ದರು.

'ಶಶಿಕಲಾ ನನ್ನನ್ನು ಉಚ್ಚಾಟನೆಗೊಳಿಸುವುದಕ್ಕೆ ಮುನ್ನವೇ ನಾನು ಆಕೆಯನ್ನು ಉಚ್ಚಾಟನೆಗೊಳಿಸಿದ್ದಾನೆ. ಪಕ್ಷದ ನಿಯಮಗಳನ್ನು ಉಲ್ಲಂಘನೆಗೊಳಿಸಿ ಕಾರಣದಿಂದ ಶಶಿಕಲಾ ನಟರಾಜನ್ ಅವರನ್ನು ಪಕ್ಷದ ಪ್ರಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೂ ಪತ್ರ ಬರೆದಿದ್ದೇನೆ'ಎಂದು ಮಧುಸೂದನ್ ತಿಳಿಸಿದ್ದಾರೆ.

ಶಶಿಕಲಾ ಕೂಡ ಇದೇ ಕಾರಣ ಕೊಟ್ಟು ಮಧುಸೂದನ್ ಅವರನ್ನು ಉಚ್ಚಾಟನೆಗೊಳಿಸಿದ್ದರು. ಇವರ ಜಾಗಕ್ಕೆ ಮಾಜಿ ಮಂತ್ರಿ ಕೆ.ಎ. ಸೆಂಗೋಟಿಯನ್ ಅವರನ್ನು ನೇಮಿಸಿದ್ದರು. ಕಾನೂನಿನ ನಿಯಮಗಳ ಪ್ರಕಾರ ಪಕ್ಷದಿಂದ ಉಚ್ಚಾಟನೆಗೊಂಡವರು ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಸುವಂತಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
Karnataka News Live: ಅಧಿವೇಶನಕ್ಕೂ ಮೊದಲೇ ಬ್ರದರ್ಸ್ ಒಗ್ಗಟ್ಟು: ಬಿಜೆಪಿ ಮೇಲೆ ಸವಾರಿ ಮಾಡಲು ಕಾಂಗ್ರೆಸ್ ಸಜ್ಜು