
ಶಿವಮೊಗ್ಗ : ಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿರುವ ಕುವೆಂಪು ವಿವಿ ವ್ಯಾಪ್ತಿಯ ಅವರಣದಲ್ಲಿ ಯಥೇಚ್ಛವಾಗಿರುವ ಶ್ರೀಗಂಧದ ಮರಗಳು ಮರಗಳ್ಳರ ಪಾಲಾಗುತ್ತಿವೆ.
ರಾತ್ರೋರಾತ್ರಿ ಸದ್ದಿಲ್ಲದೇ ಬರುವ ಮರಗಳ್ಳರು ಬ್ಲೇಡ್ , ಗರಗಸ ಮೊದಲಾದವುಗಳನ್ನು ಬಳಸಿ ಬೆಲೆಬಾಳುವ ಶ್ರೀಗಂಧದ ಮರಗಳ ಮಾರಣ ಹೋಮ ನಡೆಸಿದ್ದಾರೆ.
ಮರಗಳ ತೊಗಟೆಯನ್ನು ತೆಗೆದು ಒಣಗುವಂತೆ ಮಾಡಿ ದಂಧೆಕೋರರು ನಂತರ ಅವುಗಳನ್ನು ಕಡಿದು ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ.
ಕುವೆಂಪು ವಿವಿಯ ಅವರಣದಲ್ಲಿ 60 ಕ್ಕೂ ಹೆಚ್ಚು ಸಿಬ್ಬಂದಿಗಳು ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದರೂ ಶ್ರೀಗಂಧದ ಮರಗಳ ಕಳವು ಮಾತ್ರ ತಪ್ಪಿಲ್ಲ.
ನೈಸರ್ಗಿಕವಾಗಿ ಬೆಳೆದ 600 ಕ್ಕೂ ಶ್ರೀಗಂಧದ ಮರಗಳ ಪೈಕಿ ಅರ್ಧದಷ್ಟು ಮರಗಳು ಕಳ್ಳರ ಪಾಲಾಗಿರುವುದು ವಿವಿ ಸಿಬ್ಬಂದಿಗಳೇ ಶಾಮೀಲಾಗಿರುವ ಸಂಶಯ ಮೂಡಿಸಿದೆ.
ಹೀಗೆ ಶ್ರೀಗಂಧದ ಮರಗಳನ್ನು ಕಟಾವು ಮಾಡಿದ್ದನ್ನು ಗಮನಿಸಿದ ವಿದ್ಯಾರ್ಥಿಗಳು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.