ಸರಕಾರ ಅನುರಾಗ್ ತಿವಾರಿಗೆ 5 ತಿಂಗಳು ಸಂಬಳ ತಡೆಹಿಡಿದದ್ದು ಯಾಕೆ?

Published : May 20, 2017, 12:52 PM ISTUpdated : Apr 11, 2018, 12:39 PM IST
ಸರಕಾರ ಅನುರಾಗ್ ತಿವಾರಿಗೆ 5 ತಿಂಗಳು ಸಂಬಳ ತಡೆಹಿಡಿದದ್ದು ಯಾಕೆ?

ಸಾರಾಂಶ

ಹಗರಣ ಬಯಲಿಗೆಳೆಯಲು ಮುಂದಾದ ತಿವಾರಿಗೆ ಸಂಬಳ ತಡೆಹಿಡಿಯುವುದೂ ಸೇರಿದಂತೆ ನಾನಾ ರೀತಿಯಲ್ಲಿ ಒತ್ತಡ ಹೇರಲಾಗುತ್ತಿತ್ತೇ? ಸರಕಾರ ಯಾವ ಕಾರಣಕ್ಕೆ ಅನುರಾಗ್ ತಿವಾರಿಯವರ ಸಂಬಳ ತಡೆಹಿಡಿದಿತ್ತು? ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ಬೆಂಗಳೂರು(ಮೇ 20): ಮೃತ ಐಎಎಸ್ ಅಧಿಕಾರಿ ಅನುರಾಗ್ ತಿವಾರಿಗೆ ಕಳೆದ 5 ತಿಂಗಳಿನಿಂದ ಸಂಬಳವೇ ಆಗಿರಲಿಲ್ಲವಾ? ಅನುರಾಗ್ ತಿವಾರಿ ಕುಟುಂಬ ಸದಸ್ಯರೇ ಇಂಥದ್ದೊಂದು ಮಾಹಿತಿಯನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ. ಹಗರಣ ಬಯಲಿಗೆಳೆಯಲು ಮುಂದಾಗಿದ್ದಕ್ಕೆ ಅನುರಾಗ್ ಜೀವ ಕಳೆದುಕೊಳ್ಳಬೇಕಾಯಿತು ಎಂದು ಕುಟುಂಬಸದಸ್ಯರು ಆರೋಪಿಸಿದ್ದಾರೆ.

ಕಳೆದ 5 ತಿಂಗಳಿನಿಂದ ಅನುರಾಗ್'ಗೆ ಸಂಬಳವೇ ಆಗಿರಲಿಲ್ಲ. ಸೋದರ ಮಯಂಕ್'ರಿಂದ ಕೆಲ ತಿಂಗಳಿನಿಂದ ಅನುರಾಗ್ ಹಣ ಪಡೆದಿದ್ದರು. ಅವರ ಬ್ಯಾಂಕ್ ಖಾತೆಯಲ್ಲಿ ಕೇವಲ 11 ಸಾವಿರ ರೂಪಾಯಿ ಇದೆ ಎನ್ನಲಾಗಿದೆ.

ಹಗರಣ ಬಯಲಿಗೆಳೆಯಲು ಮುಂದಾದ ತಿವಾರಿಗೆ ಸಂಬಳ ತಡೆಹಿಡಿಯುವುದೂ ಸೇರಿದಂತೆ ನಾನಾ ರೀತಿಯಲ್ಲಿ ಒತ್ತಡ ಹೇರಲಾಗುತ್ತಿತ್ತೇ? ಸರಕಾರ ಯಾವ ಕಾರಣಕ್ಕೆ ಅನುರಾಗ್ ತಿವಾರಿಯವರ ಸಂಬಳ ತಡೆಹಿಡಿದಿತ್ತು? ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ಕೆಲಸ ಮಾಡಿದ್ದು 65 ದಿನ ಮಾತ್ರ:
ಅನುರಾಗ್ ತಿವಾರಿಯವರು 5 ತಿಂಗಳ ಹಿಂದೆ, ಜ.4ರಂದು ಆಹಾರ ಇಲಾಖೆಯ ಅಧಿಕಾರಿಯಾಗಿ ಸೇರಿಕೊಂಡರಾದರೂ ಅಲ್ಲಿ ಕೆಲಸ ಮಾಡಿದ್ದು 65 ದಿನ ಮಾತ್ರ. ಈ ಮಧ್ಯೆ 13 ದಿನಗಳ ಕಾಲ ಪಂಜಾಬ್ ಚುನಾವಣೆಯಲ್ಲಿ ಕೆಲಸ ಮಾಡಿದರು. ಮಾರ್ಚ್ 5-15ವರೆಗೆ ಮತ್ತೊಮ್ಮೆ ಪಂಜಾಬ್ ಚುನಾವಣೆ ಮತ ಎಣಿಕೆ ಸೇವೆಗೆ ತೆರಳಿದ್ದರು. ಏಪ್ರಿಲ್ 7ರಂದು ಉತ್ತರಪ್ರದೇಶಕ್ಕೆ ತರಬೇತಿಗೆಂದು ತಿವಾರಿ ತೆರಳಿದ್ದರು. ಜ.4ರಿಂದ ಏ.7ರವರೆಗೆ ಅವರು ಆಹಾರ ಇಲಾಖೆಯಲ್ಲಿ ಕೆಲಸ ಮಾಡಿದ್ದು 65 ದಿನ ಮಾತ್ರ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆನೆಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ರೈಲು, 7 ಗಜ ಬಲಿ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ