
ಗುವಾಹಟಿ : ಅಸ್ಸಾಂ ಸರ್ಕಾರ ತನ್ನ ನೌಕರರಿಗೆ ಇದೀಗ ಕಟ್ಟು ನಿಟ್ಟಿನ ಆದೇಶವೊಂದನ್ನು ಹೊರಡಿಸಿದೆ. ಪೋಷಕರು ಹಾಗೂ ಅಂವೈಕಲ್ಯ ಹೊಂದಿದ ಸಹೋದರರನ್ನು ನೋಡಿಕೊಳ್ಳದಿದ್ದಲ್ಲಿ ಅವರ ಸಂಬಳದಲ್ಲಿ ಶೇ.10 ರಿಂದ ಶೇ. 15ರಷ್ಟು ಕಡಿತ ಮಾಡಲಿದೆ.
ಯಾವುದೇ ಆದಾಯವನ್ನು ಹೊಂದದೇ ಸರ್ಕಾರಿ ಉದ್ಯೋಗದಲ್ಲಿರುವ ತಮ್ಮವರನ್ನೇ ನಂಬಿಕೊಂಡಿದ್ದು ಅವರನ್ನು ನೋಡಿಕೊಳ್ಳದಿದ್ದಲ್ಲಿ ಸಂಬಳದಲ್ಲಿ ಕಡಿತವಾಗಲಿದೆ.
ಇನ್ನು ಸರ್ಕಾರಿ ನೌಕರಿಯಲ್ಲಿದ್ದವರು ದೈಹಿಕ ನ್ಯೂನತೆ ಹೊಂದಿದ ತಮ್ಮ ಸಹೋದರ ಸಹೋದರಿಯರನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಹಣಕಾಸು ಸಚಿವ ಹಿಮಂತಾ ಬಿಸ್ವಾ ಸರ್ಮಾ ಹೇಳಿದ್ದಾರೆ.
ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರ ಇಂತಹ ಕಾಯ್ದೆಯೊಂದನ್ನು ಜಾರಿಗೆ ತಂದಿದೆ. ಇದಕ್ಕೆ ಪ್ರಣಮ್ ಕಾಯ್ದೆ ಎಂದು ಹೆಸರಿಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.