
ಜೋಧ್’ಪುರ : ಇಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಕೃಷ್ಣ ಮೃಗ ಭೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. ಜೋಧ್ಪುರ ಕೋರ್ಟ್ ಪ್ರಕರಣದಲ್ಲಿ ಸಲ್ಮಾನ್ ಖಾನ್ ದೋಷಿ ಎಂದು ತೀರ್ಪು ನೀಡಿದ್ದು, ಉಳಿದವರನ್ನು ದೋಷಮುಕ್ತಗೊಳಿಸಿದೆ. ಅಂತಿಮ ವಿಚಾರಣೆಗೆ ಹಾಜರಾಗಿದ್ದ ಸೈಫ್ ಆಲಿಖಾನ್ ಮಾಧ್ಯಮ ಮತ್ತು ಚಾಲಕನ ಮೇಲೆ ದುರ್ವರ್ತನೆ ತೋರಿದ್ದು, ಸದ್ದು ಮಾಡುತ್ತಿದೆ.
ಸೋನಾಲಿ ಬೇಂದ್ರೆ, ಟಬು, ನೀಲಮ್, ಸೈಫ್ ಅಲಿ ಖಾನ್ ಬುಧವಾರವೇ ಜೋಧ್’ಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು.
ಈ ವೇಳೆ ನಟ ಸೈಫ್ ಅಲಿ ಖಾನ್ ಮಾಧ್ಯಮದವರೊಂದಿಗೆ ದುರ್ನಡೆ ಪ್ರದರ್ಶಿಸಿದ್ದಾರೆ. ಅಲ್ಲದೇ ತಮ್ಮ ಡ್ರೈವರ್ ಜೊತೆಗೂ ಕೂಡ ದುರ್ವರ್ತನೆ ತೋರಿದ್ದಾರೆ. ಇಂತಹ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.