ನನ್ನ ಬಣ್ಣ ಕೇಸರಿಯಲ್ಲ ಎಂದ ಕಮಲ್ : ರಾಜಕೀಯ ವಾಸನೆ ಮತ್ತೊಮ್ಮೆ ಸ್ಪಷ್ಟ

Published : Sep 01, 2017, 08:52 PM ISTUpdated : Apr 11, 2018, 01:09 PM IST
ನನ್ನ ಬಣ್ಣ ಕೇಸರಿಯಲ್ಲ ಎಂದ ಕಮಲ್ : ರಾಜಕೀಯ ವಾಸನೆ ಮತ್ತೊಮ್ಮೆ ಸ್ಪಷ್ಟ

ಸಾರಾಂಶ

ಆದರೆ ಭೇಟಿ ಬಳಿಕ ಮಾತನಾಡಿದ ಕಮಲ್  40 ವರ್ಷಗಳಿಂದ ಚಿತ್ರರಂಗದಲ್ಲಿ ನನ್ನ ಬಣ್ಣ ಯಾವುದೆಂದು  ನೋಡಿದ್ದೀರಾ, ಕೇಸರಿ ನನ್ನ ಬಣ್ಣವಲ್ಲ  ಎಂದು ಗೊಂದಲ ಮೂಡಿಸಿದ್ದಾರೆ. 

ಖ್ಯಾತ ನಟ ಕಮಲ್ ಹಾಸನ್ ರಾಜಕೀಯ ಎಂಟ್ರಿ ಸುದ್ದಿ ಹಸಿಯಾಗಿರುವಾಗಲೇ, ಇಂದು ಕಮಲ್ ಹಾಸನ್ ಕೇರಳ ಮುಖ್ಯಮಂತ್ರಿಯನ್ನ ಭೇಟಿ ಮಾಡಿದ್ದಾರೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿದ ಕಮಲ್ ಹಾಸನ್ ರಾಜಕೀಯ ನಿರ್ಧಾರಗಳ  ಬಗ್ಗೆ ಚರ್ಚೆ ನಡೆಸಿದ್ದಾಗಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.  ಈ ಮೂಲಕ ಕಮಲ್​ ಹಾಸನ್ ರಾಜಕೀಯ ರಂಗ ಪ್ರವೇಶ ಮಾಡುವ ಸೂಚನೆ ನೀಡಿದ್ದಾರೆ.

ಆದರೆ ಭೇಟಿ ಬಳಿಕ ಮಾತನಾಡಿದ ಕಮಲ್  40 ವರ್ಷಗಳಿಂದ ಚಿತ್ರರಂಗದಲ್ಲಿ ನನ್ನ ಬಣ್ಣ ಯಾವುದೆಂದು  ನೋಡಿದ್ದೀರಾ, ಕೇಸರಿ ನನ್ನ ಬಣ್ಣವಲ್ಲ  ಎಂದು ಗೊಂದಲ ಮೂಡಿಸಿದ್ದಾರೆ.  ಪಿಣರಾಯಿ ಸರ್ಕಾರಕ್ಕೆ 2 ವರ್ಷ ತುಂಬಿದ ಹಿನ್ನೆಲೆ ಹಾಗೂ ಓಣಂ ಹಬ್ಬದ ಶುಭಾಶಯ ತಿಳಿಸಲು ಭೇಟಿ ಮಾಡಿದ್ದು. ಅಲ್ದೇ ಪಿಣರಾಯಿ ವಿಜಯನ್ ಜೊತೆ ಮಾತುಕತೆ ಸಾಮಾನ್ಯವಲ್ಲ. ಬದಲಾಗಿ ಒಂದು ಉತ್ತಮ ಅನುಭವವಾಗಿದೆ ಎಂದು ತಲೆಯಲ್ಲಿ ಹುಳ ಬಿಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ವಿಮಾನದಲ್ಲಿ ಹೃದಯಾಘಾತ- ಅಮೆರಿಕ ಪ್ರಜೆಯ ಜೀವ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್