‘ಮಹಾ ಜನಾದೇಶ’ ಇಲ್ಲ: ಬಿಜೆಪಿಗೆ ಶಿವಸೇನೆ ಚಾಟಿ!

Published : Oct 26, 2019, 08:51 AM IST
‘ಮಹಾ ಜನಾದೇಶ’ ಇಲ್ಲ: ಬಿಜೆಪಿಗೆ ಶಿವಸೇನೆ ಚಾಟಿ!

ಸಾರಾಂಶ

‘ಮಹಾ ಜನಾದೇಶ’ ಇಲ್ಲ: ಬಿಜೆಪಿಗೆ ಶಿವಸೇನೆ ಚಾಟಿ| ಸಂಜಯ ರಾವುತ್‌ ಪ್ರಕಟಿಸಿದ ವ್ಯಂಗ್ಯಚಿತ್ರ, ‘ಸಾಮ್ನಾ’ದ ಮುಖಪುಟ| ‘ಹುಲಿ’ಯು ‘ಗಡಿಯಾರ’ ಧರಿಸಿದ ವ್ಯಂಗ್ಯಚಿತ್ರದ ಮೂಲಕವೂ ಟಾಂಗ್‌

ಮುಂಬೈ[ಅ.26]: ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಹಿಡಿದರೂ, ಶಿವಸೇನೆಯು ಕೇಸರಿ ಪಕ್ಷದ ಜತೆಗಿನ ಗುದ್ದಾಟ ಮುಂದುವರಿಸಿದೆ. ‘ಮಹಾರಾಷ್ಟ್ರದಲ್ಲಿ ಬಂದಿದ್ದು ‘ಮಹಾ ಜನಾದೇಶ’ ಅಲ್ಲ. ಅಧಿಕಾರದ ಮದ ಏರಿದವರಿಗೆ ಜನ ‘ಕಪಾಳಮೋಕ್ಷ’ ಮಾಡಿದ್ದಾರೆ’ ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿ ಟೀಕಿಸಲಾಗಿದೆ.

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು 288 ಕ್ಷೇತ್ರಗಳ ಪೈಕಿ 200 ಕ್ಷೇತ್ರಗಳಲ್ಲಿ ‘ಮಹಾ ಜನಾದೇಶ’ ಯಾತ್ರೆ ಕೈಗೊಂಡಿದ್ದರು. ‘ಸಾಮ್ನಾ’ದ ಮುಖಪುಟದಲ್ಲಿ ಶುಕ್ರವಾರ ಇದಕ್ಕೆ ‘ಇದು ಮಹಾ ಜನಾದೇಶವಲ್ಲ’ ಎಂದು ಬರೆದು ಪರೋಕ್ಷ ‘ಟಾಂಗ್‌’ ನೀಡಲಾಗಿದೆ.

ಈ ನಡುವೆ, ಶಿವಸೇನೆ ಸಂಸದ ಸಂಜಯ ರಾವುತ್‌ ಅವರು ಕುತೂಹಲಕಾರಿ ಚಿತ್ರವೊಂದನ್ನು ಟ್ವೀಟ್‌ ಮಾಡಿದ್ದಾರೆ. ಇದರಲ್ಲಿ ಶಿವಸೇನೆಯ ಚಿಹ್ನೆಯಾದ ‘ಹುಲಿ’, ಎನ್‌ಸಿಪಿ ಚಿಹ್ನೆಯಾದ ‘ಗಡಿಯಾರ’ವನ್ನು ಕೊರಳು ಸರದ ರೀತಿ ಕಟ್ಟಿಕೊಂಡು ಬಿಜೆಪಿ ‘ಚಿಹ್ನೆ’ಯಾದ ಕಮಲವನ್ನು ಕಾಂಗ್ರೆಸ್‌ ಚಿಹ್ನೆಯಾದ ‘ಕೈ’ಯಲ್ಲಿ ಹಿಡಿದು ಮೂಸುತ್ತಿದೆ. ಇದರ ಕೆಳಗೆ ‘ತಪ್ಪಾಗಿ ತಿಳೀಬೇಡಿ. ದೀಪಾವಳಿ ಇದೆ’ ಎಂದು ಬರೆಯಲಾಗಿದೆ.

ಮಹಾರಾಷ್ಟ್ರದಲ್ಲಿ ಸಿಎಂ ಸ್ಥಾನವನ್ನು ಅರ್ಧ ಅವಧಿಗೆ ಹಂಚಿಕೊಳ್ಳಬೇಕು ಎಂಬ ತನ್ನ ಬೇಡಿಕೆಗೆ ಶಿವಸೇನೆ ಮಣಿಯದೇ ಹೋದರೆ ಎನ್‌ಸಿಪಿ-ಕಾಂಗ್ರೆಸ್‌ ಜತೆ ಶಿವಸೇನೆ ಸಖ್ಯ ಬೆಳೆಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್‌ ಮುಖಂಡ ಪೃಥ್ವಿರಾಜ್‌ ಚವಾಣ್‌ ಗುರುವಾರ ಇದೇ ಮಾತು ಹೇಳಿದ್ದರು. ಹೀಗಾಗಿ ‘ಹುಲಿ’ಯು ‘ಗಡಿಯಾರ’ ಧರಿಸಿದ ವ್ಯಂಗ್ಯಚಿತ್ರದ ಹಿಂದೆ ಶಿವಸೇನೆಯು ಬಿಜೆಪಿಗೆ ಪರೋಕ್ಷ ಎಚ್ಚರಿಕೆ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್