
ಮಂಗಳೂರು[ಸೆ.08]: ಚಂದ್ರಯಾನ-2 ಯೋಜನೆ ವೈಫಲ್ಯದ ಹಿಂದೆ ರಷ್ಯಾ ಇದೆಯೇ? ಇಂಥದ್ದೊಂದು ಅನುಮಾವನ್ನು ಈಗ ಮಾಜಿ ಸಚಿವ ಯು.ಟಿ.ಖಾದರ್ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಚಂದ್ರಯಾನ ಕುರಿತು ಮಾತನಾಡಿದ ಅವರು, ‘ಚಂದ್ರಯಾನ ಯೋಜನೆಗೆ ಆರಂಭದಲ್ಲಿ ರಷ್ಯಾ ದೇಶದ ಜತೆಗೆ ಇಸ್ರೋ ಒಪ್ಪಂದ ಮಾಡಿಕೊಂಡಿತ್ತು. 2016ರಲ್ಲಿ ಈ ಒಪ್ಪಂದ ಮುರಿಯಿತು. ಈ ಹಿನ್ನೆಲೆಯಲ್ಲಿ ಚಂದ್ರಯಾನ-2 ಯೋಜನೆ ವೈಫಲ್ಯಕ್ಕೆ ರಷ್ಯಾ ಏನಾದರೂ ಮಾಡಿರಬಹುದು. ಇಂಥ ದೇಶಕ್ಕೆ .7 ಸಾವಿರ ಕೋಟಿಗಳನ್ನು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ’ ಎಂದು ಖಾದರ್ ಟೀಕಿಸಿದರು.
ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದ ಸಾವಿರಾರು ಮಂದಿ ಸಂಕಷ್ಟಕ್ಕೀಡಾದಾಗ ನಯಾಪೈಸೆ ನೀಡದ ಕೇಂದ್ರ ರಷ್ಯಾಕ್ಕೆ ಕೋಟ್ಯಂತರ ರು. ನೀಡೋದು ಎಲ್ಲಿಂದ? ರಿಸವ್ರ್ ಬ್ಯಾಂಕ್ನ ಹಣದಲ್ಲಿ ದೇಶ ನಡೆಯುತ್ತಿರುವಾಗ ಈ ರೀತಿಯ ನಡೆಯಿಂದ ಜನರನ್ನು ಇನ್ನಷ್ಟುಸಂಕಷ್ಟಕ್ಕೆ ಕೇಂದ್ರ ಸರ್ಕಾರ ತಳ್ಳಿದೆ. ಇದಕ್ಕೆ ಉತ್ತರ ನೀಡಲೇಬೇಕು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.