ರಾಷ್ಟ್ರಪತಿ ಭಾಷಣದಲ್ಲಿ ಟಿಪ್ಪುವಿನ ಗುಣಗಾನ; ಆರ್'ಟಿಐನಿಂದ ಬಯಲಾಯ್ತು ಭಾಷಣದ ಹಿಂದಿನ 'ಕೈ'?

Published : Dec 02, 2017, 02:51 PM ISTUpdated : Apr 11, 2018, 12:54 PM IST
ರಾಷ್ಟ್ರಪತಿ ಭಾಷಣದಲ್ಲಿ ಟಿಪ್ಪುವಿನ ಗುಣಗಾನ; ಆರ್'ಟಿಐನಿಂದ ಬಯಲಾಯ್ತು ಭಾಷಣದ ಹಿಂದಿನ 'ಕೈ'?

ಸಾರಾಂಶ

ಕನ್ನಡಿಗ ಪಿ ಆದಿತ್ಯ ನಾರಾಯಣ್ ಸಲ್ಲಿಸಿದ್ದ ಮಾಹಿತಿ ಹಕ್ಕು ಪ್ರಶ್ನೆಗೆ ರಾಷ್ಟ್ರಪತಿ ಭವನದಿಂದ ಉತ್ತರ ಸಿಕ್ಕಿದೆ. ಸುವರ್ಣ ನ್ಯೂಸ್'ಗೆ ರಾಷ್ಟ್ರಪತಿ ಭವನದ ಪತ್ರದ ಪ್ರತಿ ಲಭ್ಯವಾಗಿದೆ.

ಬೆಂಗಳೂರು(ಡಿ.02): ಟಿಪ್ಪು ಸುಲ್ತಾನ್ ಹೊಗಳುವ ಮೂಲಕ ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿದ್ದ ರಾಷ್ಟ್ರಪತಿ ರಾಮ್'ನಾಥ್ ಕೋವಿಂದ ಅವರಿಗೆ ಭಾಷಣ ಸಿದ್ದಪಡಿಸಿದ್ದು ಯಾರು ಎನ್ನುವುದು ಮಾಹಿತಿ ಆರ್'ಟಿಐ ಕಾರ್ಯಕರ್ತ ಸಲ್ಲಿಸಿದ್ದ ಅರ್ಜಿಯಿಂದ ಬಯಲಾಗಿದೆ.

ಕಳೆದ ತಿಂಗಳ ವಿಧಾನಸೌಧ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ ನಾಡಿದ ನೆಲ,ಜಲ, ಸಂಸ್ಕೃತಿ ಹಾಗೂ ಸ್ವಾತಂತ್ರ ಹೋರಾಟಗಾರರನ್ನು ಕೊಂಡಾಡುವ ವೇಳೆ ಮೈಸೂರು ಹುಲಿ ಎಂದೇ ಕರೆಯಲ್ಪಡುವ ಟಿಪ್ಪು ಸುಲ್ತಾನ್ ಅವರನ್ನು ಕ್ಷಿಪಣಿಗಳ ಜನಕ, ಅದನ್ನು ಯೂರೋಪಿಯ್ನರು ಅಳವಡಿಸಿಕೊಂಡಿದ್ದರು. ಹಾಗೆಯೇ ಟಿಪ್ಪು ಬ್ರಿಟೀಷರ ವಿರುದ್ಧ ಹೋರಾಡುತ್ತಲೇ ವೀರೋಚಿತ ಮರಣವನ್ನಪ್ಪಿದ್ದ ಎಂದು ಹೇಳಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಕನ್ನಡಿಗ ಪಿ ಆದಿತ್ಯ ನಾರಾಯಣ್ ಸಲ್ಲಿಸಿದ್ದ ಮಾಹಿತಿ ಹಕ್ಕು ಪ್ರಶ್ನೆಗೆ ರಾಷ್ಟ್ರಪತಿ ಭವನದಿಂದ ಉತ್ತರ ಸಿಕ್ಕಿದೆ. ಸುವರ್ಣ ನ್ಯೂಸ್'ಗೆ ರಾಷ್ಟ್ರಪತಿ ಭವನದ ಪತ್ರದ ಪ್ರತಿ ಲಭ್ಯವಾಗಿದೆ.

ಭಾಷಣದ ಪ್ರತಿ ರಾಷ್ಟ್ರಪತಿ ಭವನದಲ್ಲೇ ಸಿದ್ದವಾಗಿತ್ತು ಎಂದು ರಾಜ್ಯ ಸರ್ಕಾರ ಹೇಳಿತ್ತು. ರಾಷ್ಟ್ರಪತಿ ಭಾಷಣಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯ ಸರ್ಕಾರ ಪ್ರತಿಕ್ರಿಯೆ ನೀಡಿತ್ತು. ಆದರೆ ಭಾಷಣಕ್ಕೆ ಮೂಲ ಮಾಹಿತಿ ಕರಡು ಒದಗಿಸಿದ್ದು ರಾಜ್ಯ ಸರ್ಕಾರದ ಅಧೀನದಲ್ಲಿರುವ ವಿಧಾನಸಭೆ ಸಚಿವಾಲಯ ಎಂಬ ಮಾಹಿತಿ ಬಯಲಾಗಿದೆ. ಕರಡು ಮಾಹಿತಿ ಆಧಾರದಲ್ಲೇ ಅಂತಿಮ ಭಾಷಣ ಸಿದ್ದಪಡಿಸಿದ್ದು ರಾಷ್ಟ್ರಪತಿ ಸೆಕ್ರೇಟರಿಯೇಟ್ ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ