ಅಬ್ದುಲ್ಲಾ ನಾಲಿಗೆ ಕತ್ತರಿಸಿದವರಿಗೆ 21 ಲಕ್ಷ ರು!

Published : Nov 22, 2017, 04:40 PM ISTUpdated : Apr 11, 2018, 12:50 PM IST
ಅಬ್ದುಲ್ಲಾ ನಾಲಿಗೆ ಕತ್ತರಿಸಿದವರಿಗೆ 21 ಲಕ್ಷ ರು!

ಸಾರಾಂಶ

ಪಾಕಿಸ್ತಾನ ಪರ ಮತ್ತು ಆರ್‌ಎಸ್‌ಎಸ್ ವಿರೋಧಿ ಹೇಳಿಕೆ ನೀಡಿದ ಜಮ್ಮು-ಕಾಶ್ಮೀರ ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ ಅವರ ನಾಲಿಗೆಯನ್ನು ಕತ್ತರಿಸಿದವರಿಗೆ 21 ಲಕ್ಷ ರು. ಬಹುಮಾನ ನೀಡುವುದಾಗಿ ‘ಭಾರತೀಯ ಉಗ್ರ ನಿಗ್ರಹ ರಂಗ’ ಎಂಬ ಸಂಘಟನೆ ಮಂಗಳವಾರ ಘೋಷಣೆ ಮಾಡಿದೆ.

ಚಂಡೀಗಢ/ ನವದೆಹಲಿ: ಪಾಕಿಸ್ತಾನ ಪರ ಮತ್ತು ಆರ್‌ಎಸ್‌ಎಸ್ ವಿರೋಧಿ ಹೇಳಿಕೆ ನೀಡಿದ ಜಮ್ಮು-ಕಾಶ್ಮೀರ ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ ಅವರ ನಾಲಿಗೆಯನ್ನು ಕತ್ತರಿಸಿದವರಿಗೆ 21 ಲಕ್ಷ ರು. ಬಹುಮಾನ ನೀಡುವುದಾಗಿ ‘ಭಾರತೀಯ ಉಗ್ರ ನಿಗ್ರಹ ರಂಗ’ ಎಂಬ ಸಂಘಟನೆ ಮಂಗಳವಾರ ಘೋಷಣೆ ಮಾಡಿದೆ.

ಉಗ್ರ ವಿರೋಧಿ ರಂಗದ ರಾಷ್ಟ್ರೀಯ ಅಧ್ಯಕ್ಷ ವೀರೇಶ್ ಶಾಂಡಿಲ್ಯ ಈ ಘೋಷಣೆ ಮಾಡಿದ್ದು ‘ಶ್ರೀನಗರದ ಸಂಸದರಾದ ಫಾರೂಖ್ ವಿರುದ್ಧ ತ್ವರಿತವಾಗಿ ತನಿಖೆ ಕೈಗೊಂಡು, ಅವರನ್ನು ಬಂಧಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಫಾರೂಖ್ ಅವರು ದೇಶದ್ರೋಹಿಯಾಗಿದ್ದು, ಅವರಿಗೆ ನೀಡಲಾಗಿರುವ ಝಡ್ ಪ್ಲಸ್ ಭದ್ರತೆಯನ್ನು ಕೇಂದ್ರ ವಾಪಸ್ ಪಡೆಯಬೇಕು. ಫಾರೂಖ್ ನಾಲಿಗೆ ಕತ್ತರಿಸಿದವರಿಗೆ 21 ಲಕ್ಷ ರು. ಇನಾಮು ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಹೈಕೋರ್ಟ್ ನಕಾರ: ಈ ನಡುವೆ, ಅಬ್ದುಲ್ಲಾ ವಿರುದ್ಧ ಯಾವುದೇ ಆದೇಶ ಹೊರಡಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಈ ಕುರಿತು ಸಂಬಂಧಪಟ್ಟ ಸರ್ಕಾರಿ ಇಲಾಖೆಗೆ ದೂರು ಸಲ್ಲಿಸಬೇಕು. ಸರ್ಕಾರವೇ ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

58 ವರ್ಷ ಸಂಸಾರ: ವೃದ್ಧಾಪ್ಯದಲ್ಲಿ ಡಿವೋರ್ಸ್‌ಗೆ ಅರ್ಜಿ: ದಂಪತಿಗೆ ವಿಚ್ಛೇದನ ನೀಡಲು ಕೋರ್ಟ್ ನಿರಾಕರಿಸಿದ್ದೇಕೆ?
ಬಿಕ್ಲು ಶಿವ ಕೊಲೆ ಪ್ರಕರಣ: ಬಿಜೆಪಿ ಶಾಸಕ ಬೈರತಿ ಬಸವರಾಜ್ 7 ದಿನ ಸಿಐಡಿ ಕಸ್ಟಡಿಗೆ