ಸರಗಳ್ಳನೆಂದು ಥಳಿಸಿದಾಗ ಸಿಕ್ಕಿದ್ದು 1 ಕೋಟಿ ಹಳೇ ನೋಟು!

Published : Aug 22, 2017, 12:31 PM ISTUpdated : Apr 11, 2018, 12:37 PM IST
ಸರಗಳ್ಳನೆಂದು ಥಳಿಸಿದಾಗ ಸಿಕ್ಕಿದ್ದು 1 ಕೋಟಿ ಹಳೇ ನೋಟು!

ಸಾರಾಂಶ

ತನ್ನ ಗೆಳೆಯರ ಜತೆ ಜಗಳ ಮಾಡಿಕೊಂಡು ಓಡಿ ಹೋಗುತ್ತಿದ್ದ ಅಪರಿಚಿತನನ್ನು ಸರಗಳ್ಳನೆಂದು ಶಂಕಿಸಿ ಸಾರ್ವಜನಿಕರು ಥಳಿಸಿದಾಗ ಸಿಕ್ಕಿದ್ದು ಬರೋಬ್ಬರೀ 1 ಕೋಟಿ ರೂಪಾಯಿ ಮೊತ್ತದ ನೋಟು! ಇದು ಭಾನುವಾರ ಸಂಜೆ ಗಾಯತ್ರಿನಗರದಲ್ಲಿ ನಿಷೇಧಿತ ನೋಟು ಬದಲಾವಣೆ ಯತ್ನಿಸಿ ಸೆರೆಯಾದವನ ಅಸಲಿ ಕತೆ.

ಬೆಂಗಳೂರು: ತನ್ನ ಗೆಳೆಯರ ಜತೆ ಜಗಳ ಮಾಡಿಕೊಂಡು ಓಡಿ ಹೋಗುತ್ತಿದ್ದ ಅಪರಿಚಿತನನ್ನು ಸರಗಳ್ಳನೆಂದು ಶಂಕಿಸಿ ಸಾರ್ವಜನಿಕರು ಥಳಿಸಿದಾಗ ಸಿಕ್ಕಿದ್ದು ಬರೋಬ್ಬರೀ 1 ಕೋಟಿ ರೂಪಾಯಿ ಮೊತ್ತದ ನೋಟು!

ಇದು ಭಾನುವಾರ ಸಂಜೆ ಗಾಯತ್ರಿನಗರದಲ್ಲಿ ನಿಷೇಧಿತ ನೋಟು ಬದಲಾವಣೆ ಯತ್ನಿಸಿ ಸೆರೆಯಾದವನ ಅಸಲಿ ಕತೆ.

ದೊಡ್ಡ ಬಾಣಸವಾಡಿ ನಿವಾಸಿ ಪ್ರಭಾಕರನ್ ದಾಸ್’ನನ್ನು ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರರು ಬಂಧಿಸಿದ್ದು, ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ದಾಸ್ ಗೆಳೆಯರಾದ ಅಲ್ತಾಫ್, ರಿಜ್ವಾನ್, ಸುನೀಲ್ ಹಾಗೂ ಉಲ್ಲಾಸ್ ಪತ್ತೆಗೆ ತನಿಖೆ ಮುಂದುವರೆದಿದೆ.

ಆರೋಪಿಯಿಂದ 500 ಮತ್ತು 100 ರೂ. ಮುಖಬೆಲೆಯ ಒಂದು ಕೋಟಿ ರೂ. ಮೌಲ್ಯದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಗಾಯತ್ರಿನಗರ ಬಳಿ ಬಾನುವಾರ ಸಂಜೆ 6.45ರ ಹೊತ್ತಿಗೆ ಉಲ್ಲಾಸ್ ಜತೆ ಹಣ ಬದಲಾವಣೆಗೆ ದಾಸ್ ಬಂದಿದ್ದು, ಆಗ ಅವರಲ್ಲಿ ಹಣದ ವಿಚಾರವಾಗಿ ಜಗಳವಾಗಿದೆ. ಬಳಿಕ ಕೋಪಗೊಂಡ ದಾಸ್, ಅಲ್ಲಿಂದ ಹಣ ಸಮೇತ ಪರಾರಿಯಾಗಲು ಯತ್ನಿಸಿದ್ದ. ರಸ್ತೆಯಲ್ಲಿ ಗಡ್ಡಧಾರಿಯೊಬ್ಬ ಸೂಟ್’ಕೇಸ್ ಹಿಡಿದು ಓಡುತ್ತಿದ್ದವನನ್ನು ಕಂಡು ಸ್ಥಳೀಯರು, ಆತನು ಸರಗಳ್ಳನಿರಬಹುದೆಂದು ಅನುಮಾನಿಸಿ ಬೆನ್ನಟ್ಟಿ ಹಿಡಿದಿದ್ದಾರೆ. ಅಷ್ಟರಲ್ಲಿ ಮಹಿಳೆಯೊಬ್ಬರು ಆ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಆನಂತರ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ತೆರಳಿದ ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬ್ಲಾಕ್ & ವೈಟ್ ದಂಧೆ ಬೆಳಕಿಗೆ ಬಂದಿದೆ ಎಂದು ಅಧೀಕಾರಿಗಳು ಮಾಹಿತಿ ನೀಡಿದ್ದಾರೆ.

ರೆಸಿಡೆನ್ಸಿ ರಸ್ತೆ ಸಮೀಪದ ಖಾಸಗಿ ಕಂಪನಿಯಲ್ಲಿ ಪ್ರಭಾಕರನ್ ದಾಸ್ ಕೆಲಸ ಮಾಡುತ್ತಿದ್ದ. ಮೂರು ತಿಂಗಳ ಹಿಂದೆ ಅಲ್ಲಿ ಕೆಲಸ ತೊರೆದಿರುವ ಆತ ಹಣ ಬದಲಾವಣೆ ದಂಧೆಯಲ್ಲಿ ತೊಡಗಿದ್ದ ಸಂಗತಿ ಬೆಳಕಿಗೆ ಬಂದಿದೆ.

ಈಗ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನ ಬಳಿಕ ದಂಧೆಯ ಸಂಪೂರ್ಣ ವಿವರ ಸಿಗಲಿದೆ. ಅಲ್ಲದೇ ಇತರೇ ಆರೊಪಿಗಳ ಬಗ್ಗೆ ದಾಸ್ ಖಚಿತ ಮಾಹಿತಿ ನೀಡುತ್ತಿಲ್ಲ. ಅವನು ನೀಡಿರುವ ಮೊಬೈಲ್ ಸಂಖ್ಯೆಗಳು ಕೂಡಾ ಕಾರ್ಯಸ್ಥಗಿತಗೊಂಡಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

(ಸಾಂದರ್ಭಿಕ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?
ಮುಕೇಶ್ ಅಂಬಾನಿ 68ರಲ್ಲೂ ಫಿಟ್ & ಎನರ್ಜಿಟಿಕ್‌ ಆಗಿರಲು ಬೆಳಗ್ಗಿನ ಈ ಅಭ್ಯಾಸ ಕಾರಣ!