ಪುಲ್ವಾಮಾ ದಾಳಿ: ಯಶ್, ಪ್ರಕಾಶ್ ರೈ ಖಂಡನೆ

By Web DeskFirst Published Feb 15, 2019, 5:52 PM IST
Highlights

ಪುಲ್ವಾಮಾ ಉಗ್ರ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ರಾಕಿಂಗ್ ಸ್ಟಾರ್ ಯಶ್ , ಪ್ರಕಾಶ್ ರೈ ಈ ಹೇಯ ಕೃತ್ಯವನ್ನು ಖಂಡಿಸಿದ್ದಾರೆ. ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ. 

ಬೆಂಗಳೂರು (ಫೆ.15): ಪುಲ್ವಾಮಾ ಉಗ್ರ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಈ ಹೇಯ ಕೃತ್ಯವನ್ನು ಖಂಡಿಸಿದ್ದಾರೆ. ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ. 

22 ದಿನದ ಮಗು ನೋಡದ ಹುತಾತ್ಮ: ಪ್ರತಿಯೊಬ್ಬರದ್ದೂ ನೋವಿನ ಕತೆ

 

It's a sad time for our country, We have lost 44 of our Valiant soldiers. My condolences to their families, their sacrifice truly cannot be measured. I condemn this cowardly act of terrorism. I am sure India is going to serve justice to the great Martyrs.
Jai Hind 🙏🏼

— Yash (@TheNameIsYash)

ನಮ್ಮ ದೇಶಕ್ಕೆ ಇದೊಂದು ಕೆಟ್ಟ ಘಳಿಗೆ. ನಾವು 44 ಯೋಧರನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ. ಯೋಧರ ತ್ಯಾಗ, ಬಲಿದಾನವನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವೇ ಇಲ್ಲ. ಭಯೋತ್ಪಾದಕರ ಈ ಕೃತ್ಯವನ್ನು ಖಂಡಿಸುತ್ತೇನೆ. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ. 

 

ಅಂತೂ ಹುತಾತ್ಮರಿಗೆ ನಮನ ಸಲ್ಲಿಸಿದ ಕೊಹ್ಲಿ!

ವೀರ ಯೋಧರ ಬಲಿದಾನಕ್ಕೆ .. ಅವರ ತ್ಯಾಗಕ್ಕೆ ನನ್ನ ಭಾವಪೂರ್ಣ ನಮನಗಳು.. ಅವರ ತ್ಯಾಗಕ್ಕೆ ತಕ್ಕ ನ್ಯಾಯ ಸಿಗಬೇಕೆಂದು ಆಶಿಸುತ್ತೇನೆ.. ನಮ್ಮ ಕರ್ನಾಟಕದ ಮಂಡ್ಯ ಜಿಲ್ಲೆ ಯೋಧ ಗುರು ಕೂಡ ಉಗ್ರರ ದಾಳಿಗೆ ಬಲಿಯಾಗಿರುವುದು ತುಂಬ ನೋವಿನ ಸಂಗತಿ... ಎಲ್ಲಾ ಯೋಧರ ಕುಟುಂಬವರ್ಗದವರ ನೋವಿನ ಜೊತೆ ನಾವು ಇದ್ದೇವೆ..

— Yash (@TheNameIsYash)

Shocked.. saddened by ... let’s stand by the families of our soldiers.. plsss this is not the time to politicise a tragedy n start a blame game .. but it is time GOVERNMENT n the CIVIL SOCIETY to be united and assertively find a solution .. Jai hind

— Prakash Raj (@prakashraaj)

ನಟ ಪ್ರಕಾಶ್ ರೈ ಈ ಕೃತ್ಯವನ್ನು ಖಂಡಿಸಿದ್ದಾರೆ. ಪುಲ್ವಾಮಾ ದಾಳಿ ಆಘಾತ ತಂದಿದೆ. ಈ ದುರಂತವನ್ನು ರಾಜಕೀಯಗೊಳಿಸಬೇಡಿ. ನಾಗರೀಕ ಸಮಾಜ ಹಾಗೂ ಸರ್ಕಾರ ಒಟ್ಟಾಗಿ ಪರಿಹಾರವನ್ನು ಹುಡುಕಬೇಕು ಎಂದು ಹೇಳಿದ್ದಾರೆ. 


 

click me!
Last Updated Feb 15, 2019, 5:56 PM IST
click me!