ಚಾಮರಾಜಪೇಟೆಯ ಫ್ಲೈಓವರ್ ಬಳಿ ಗ್ರೇಟ್ ರಾಬರಿ

Published : Sep 29, 2016, 04:09 AM ISTUpdated : Apr 11, 2018, 12:49 PM IST
ಚಾಮರಾಜಪೇಟೆಯ ಫ್ಲೈಓವರ್ ಬಳಿ ಗ್ರೇಟ್ ರಾಬರಿ

ಸಾರಾಂಶ

ಬೆಂಗಳೂರು(ಸೆ. 29): ಕಳೆದ ರಾತ್ರಿ ರಾಜಧಾನಿಯಲ್ಲಿ ಗ್ರೇಟ್ ರಾಬರಿಯೊಂದು ನಡೆದಿದೆ. ಬರೋಬ್ಬರಿ 10 ಲಕ್ಷ ಹಣ ತೆಗೊಂಡು ಹೋಗ್ತಿದ್ದ ಸ್ಟೀಲ್ ಶಾಪ್ ಮ್ಯಾನೇಜರ್ ರಮೇಶ್ ಎಂಬುವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ.

ಹೊಸಗುಡ್ಡದಹಳ್ಳಿಯ ರಂಗನಾಥ್ ಕಾಲೋನಿಯ ಸ್ಟೀಲ್ ಶಾಪ್ ವ್ಯಾಪಾರಿ ದೀಪಕ್ ಜೈನ್ ಕೆಲವು ದಿನಗಳಿಂದ ಬಾಕಿ ಹಣ ವಸೂಲಿ ಮಾಡಿರಲಿಲ್ಲ. ನಿನ್ನೆ ಬುಧವಾರ ರಮೇಶ್​ ಅವರು ನಗರ್ತಪೇಟೆ ಸುತ್ತಲಿನ ಅಂಗಡಿಗಳಲ್ಲಿ ಸುಮಾರು 10.3 ಲಕ್ಷ ರೂ. ಪೇಮೆಂಟ್ ಕಲೆಕ್ಟ್ ಮಾಡಿ ಹಣವನ್ನು ಆಕ್ಟಿವಾ ಬೈಕ್ ಡಿಕ್ಕಿಯಲ್ಲಿ ಬ್ಯಾಗಿಟ್ಟುಕೊಂಡು ಬರುತ್ತಿರುತ್ತಾರೆ. ಇವರ ಮೇಲೆಯೇ ದುಷ್ಕರ್ಮಿಗಳು ಕಣ್ಣಿಟ್ಟಿರುತ್ತಾರೆ. ಮೈಸೂರು ಫ್ಲೈ ಓವರ್ ಸಮೀಪ ನಾಲ್ವರು ಚೋರರು ಚಾಕು ತೋರಿಸಿ ಹೆದರಿಸುತ್ತಾರೆ. ನಂತರ ರಮೇಶ್'ಗೆ ಇರಿದು 10 ಲಕ್ಷ ರೂ. ಇದ್ದ ಬ್ಯಾಗ್ ಕಿತ್ಕೊಂಡು ಪರಾರಿಯಾಗುತ್ತಾರೆ.

ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹಣ ಕಸಿದು ಪರಾರಿ ಆಗುತ್ತಿದ್ದಂತೆ ರಮೇಶ್ ಕಿರುಚಿದ್ದಾರೆ. ನಂತರ ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಕೇಸ್ ಬುಕ್ ಮಾಡಿ​ಕೊಂಡಿರುವ ಚಾಮರಾಜಪೇಟೆ ಪೊಲೀಸರು ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬಿಸಿದ್ದಾರೆ.

- ಚೇತನ್, ಕ್ರೈಂ ಬ್ಯೂರೋ, ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಿಮಾಚಲ ಪ್ರವಾಸಿ ತಾಣದಲ್ಲಿ ಪ್ಯಾರಾಗ್ಲೈಡಿಂಗ್ ಪತನ, ಓರ್ವ ಸಾವು, ಮತ್ತೊರ್ವನಿಗೆ ಗಾಯ
ಚೈನೀಸ್ ಎಂದು ನಿಂದಿಸಿ ಚಾಕು ಇರಿತ: ನಾನು ಭಾರತೀಯ ಎಂದು ಹೇಳಿ ಕೊನೆಯುಸಿರೆಳೆದ ತ್ರಿಪುರಾ ವಿದ್ಯಾರ್ಥಿ