
ಮುಂಬೈ(ಅ.2): ಸಾಮಾನ್ಯವಾಗಿ ಬೀದಿ ಬದಿಯ ವ್ಯಾಪಾರಿಗಳನ್ನು ಬಡವರು ಅಂದುಕೊಳ್ಳುತ್ತೇವೆ. ಆದರೆ ಮುಂಬೈಯಲ್ಲಿ ಬೀದಿ ಬದಿಯಲ್ಲಿ ಆಹಾರ ತಿನಿಸುಗಳನ್ನು ಮಾರಾಟ ಮಾಡುವವರು ಲಕ್ಷಾಧೀಶರಲ್ಲ ಕೋಟ್ಯಾಧಿಪತಿಗಳು ಎಂದರೇ ನೀವು ನಂಬಲೇಬೇಕು. ಮುಂಬೈ ನಗರದ ಬೀದಿ ಬದಿಯ ತಿನಿಸುಗಳ ವ್ಯಾಪಾರಿಗಳು 50 ಕೋಟಿ ರೂಪಾಯಿ ತೆರಿಗೆ ಕಟ್ಟಿರೋದು ತಡವಾಗಿ ಬೆಳಕಿಗೆ ಬಂದಿದೆ.
ಸ್ವತಃ ಸರ್ಕಾರದ ಆದಾಯ ಘೋಷಣೆ ಯೋಜನೆಯಲ್ಲಿ ವ್ಯಾಪಾರಿಗಳು ತಮ್ಮ ಆಸ್ತಿ ವಿವರ ಬಹಿರಂಗಪಡಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೇಶಾದ್ಯಂತ ದಾಳಿ ನಡೆಸಿದ ಬೆನ್ನಲ್ಲೆ ಮುಂಬೈನ ಬೀದಿ ಬದಿಯಲ್ಲಿ ಆಹಾರ ತಿನಿಸುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಆದಾಯ ಘೋಷಿಸಿದ್ದಾರೆ. ಘಟ್ಕೋಪರ್ ನ ಜ್ಯೂಸ್ ಸೆಂಟರ್ ನ ಮಾಲೀಕರೊಬ್ಬರು 5 ಕೋಟಿ ಘೋಷಿಸಿದರೆ, ಹೆಸರನ್ನು ಹೇಳಲು ಬಯಸದ ಅದೇಷ್ಟೋ ವ್ಯಾಪಾರಿಗಳು ಸುಮಾರು 25 ಲಕ್ಷದಿಂದ 2 ಕೋಟಿಯವರೆಗೂ ಆದಾಯ ಘೋಷಿಸಿದ್ದಾರೆ. ನಿನ್ನೆಯಷ್ಟೆ ದೇಶದ ನಾನಾ ಭಾಗಗಳಿಂದ ಸುಮಾರು 65,250 ಕೋಟಿ ಕಪ್ಪು ಹಣ ಹೊರಬಂದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.