ಬಡ್ತಿ ಮೀಸಲು ಗೊಂದಲ ಅಂತ್ಯ, ಅಧಿಕೃತ ಆದೇಶದಲ್ಲಿ ಏನಿದೆ?

Published : Feb 27, 2019, 07:28 PM ISTUpdated : Feb 27, 2019, 07:30 PM IST
ಬಡ್ತಿ ಮೀಸಲು ಗೊಂದಲ ಅಂತ್ಯ, ಅಧಿಕೃತ ಆದೇಶದಲ್ಲಿ ಏನಿದೆ?

ಸಾರಾಂಶ

ಬಡ್ತಿ ಮೀಸಲಾತಿ ಸಂಬಂಧ ಅಂತೂ ಇಂತೂ ಸಿಎಂ ಕುಮಾರಸ್ವಾಮಿ ಅಧಿಕೃತ ಪ್ರಕಟಣೆ ನೀಡಿದ್ದಾರೆ. ಹಲವಾರು ದಿನಗಳಿಂದ ಹಿಂದಕ್ಕೆ ಬಿದ್ದಿದ್ದ ವಿಚಾರವೊಂದಕ್ಕೆ ಅಂತ್ಯ ಸಿಕ್ಕಿದೆ.

ಬೆಂಗಳೂರು[ಫೆ. 27]  ದಲಿತಪರ ಹೋರಾಟಕ್ಕೆ ರಾಜ್ಯ ಸಮ್ಮಿಶ್ರ ಸರ್ಕಾರ ಮಣಿದಿದೆ. ಬಡ್ತಿ ಮೀಸಲಾತಿ ಕಾಯ್ದೆಯಂತೆ ದಲಿತ ನೌಕರರಿಗೆ ಮುಂಬಡ್ತಿ ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿದ್ದು ಅಧಿಕೃತ ಆದೇಶ ಹೊರಬಿದ್ದಿದೆ.

ಹಿಂಬಡ್ತಿಯಾದ ಸ್ಥಳದಲ್ಲೇ ಮುಂದುವರಿಸಲು ಆದೇಶದಲ್ಲಿ ಸೂಚನೆ ನೀಡಲಾಗಿದೆ. ಬಡ್ತಿ ಮೀಸಲಾತಿ ಜಾರಿ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂಬಡ್ತಿ ನೀಡಲು ತೀರ್ಮಾನಿಸಲಾಗಿತ್ತು. ದಲಿತ ಸಚಿವರ ಒತ್ತಡಕ್ಕೆ ಮಣಿದಿದ್ದ ಸಿಎಂ ಎಚ್.ಡಿ.ಕುಮಾರಸ್ವಾಮಿ ಮುಂಬಡ್ತಿಗೆ ಪೂರಕವಾಗಿ ಅಧಿವೇಶನದಲ್ಲಿ ವಿಧೇಯಕಕ್ಕೂ ಅಂಗೀಕಾರ ಪಡೆದುಕೊಂಡಿದ್ದರು.

ಕೇಂದ್ರದ ಮೇಲ್ವರ್ಗ ಮೀಸಲು, ಷರತ್ತು ಜಾರಿ

ಇದಾದ ಮೇಲೆ ವಿಧೇಯಕದಂತೆ ಮುಂಬಡ್ತಿ ನೀಡಲು ಸಿಎಂ ಕುಮಾರಸ್ವಾಮಿ ವಿಳಂಬ ಮಾಡಿದ್ದನ್ನು ದಲಿತ ಸಚಿವರು ಸಂಪುಟ ಸಭೆಯಲ್ಲಿ ವಿರೋಧಿಸಿದ್ದರು.  ಆದರೆ ಇಂದು ಅಧಿಕೃತ ಆದೇಶ ಹೊರಬಿದ್ದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಡಿಯೋ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಅವಮಾನ: ಶಹಬಾಜ್ ಷರೀಫ್‌ರನ್ನು ನಿರ್ಲಕ್ಷಿಸಿದ ಪುಟಿನ್!
ಯುಎಇ ಕಠಿಣ ಕಾನೂನು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, ವೇಶ್ಯಾವಾಟಿಕೆಗೆ ಶಿಕ್ಷೆ ಪ್ರಮಾಣ ಭಾರೀ ಹೆಚ್ಚಳ!