ಇಂದು ಸದನದಲ್ಲಿ ನೈಸ್ ವರದಿ ಮಂಡನೆ

Published : Dec 02, 2016, 02:16 AM ISTUpdated : Apr 11, 2018, 12:47 PM IST
ಇಂದು ಸದನದಲ್ಲಿ ನೈಸ್ ವರದಿ ಮಂಡನೆ

ಸಾರಾಂಶ

ಬಿಜೆಪಿ ಶಾಸಕ ಅಶೋಕ ಪ್ರಶ್ನೆಗೆ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಉತ್ತ​ರ.

ಸುವರ್ಣಸೌಧ, ಬೆಳ​ಗಾ​ವಿ: ವಿಧಾ​ನ​ಸ​ಭೆ​ಯಲ್ಲಿ ಶುಕ್ರ​ವಾರ ನೈಸ್‌ ವರದಿ ಮಂಡ​ನೆ​ಯಾ​ಗ​ಲಿದೆ ಎಂದು ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಹೇಳಿ​ದ್ದಾರೆ. ಕಾನೂ​ನು ಸಚಿವ ಟಿ ಬಿ ಜಯ​ಚಂದ್ರ ಅವರು ಮಂಡಿಸ​ಲಿ​ದ್ದಾರೆ. ಆದರೆ ಅವರು ಬೆಂಗ​ಳೂ​ರಿಗೆ ಹೋಗಿದ್ದು, ಶುಕ್ರ​ವಾರ ವಾಪಸ್‌ ಆಗ​ಲಿ​ದ್ದಾರೆ. ಬಂದ ನಂತರ ವರದಿ ಮಂಡಿ​ಸ​ಲಿ​ದ್ದಾರೆ ಎಂದು ವಿಧಾ​ನ​ಸ​ಭೆ​ಯಲ್ಲೇ ಬಿಜೆಪಿ ಶಾಸ​ಕ ಆರ್‌ ಅಶೋಕ್‌ ಕೇಳಿದ ಪ್ರಶ್ನೆಗೆ ಉತ್ತ​ರಿ​ಸಿ​ದ್ದಾರೆ. 

ಗುರುವಾರ ಮಧ್ಯಾಹ್ನ ವಿಧಾನ​ಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸ​ಕ ಆರ್‌. ಅಶೋಕ, ನೈಸ್‌ ವರದಿ ಏನಾಯ್ತು, ಇಂದು (ಗುರು​ವಾ​ರ) ಮಂಡಿಸಬೇಕಿತ್ತು ಎಂದು ಸ್ಪೀಕರ್‌ ಅವ​ರನ್ನು ಉದ್ದೇಶಿಸಿ ಹೇಳಿದರು. ಇದಕ್ಕೆ ಉತ್ತ​ರಿ​ಸಿದ ಕೆ ಬಿ ಕೋಳಿವಾಡ ಅವ​ರು, ವರದಿಗೆ ಸಂಬಂಧಿಸಿದಂತೆ ತಮ್ಮ ಕೆಲಸ ಮುಗಿ​ದಿದೆ. ಈಗ ಮುದ್ರಣಕ್ಕೆ ಹೋಗಿದೆ. ಕಾನೂನು ಸಚಿವರು ಶುಕ್ರವಾರ ಮಂಡಿಸಬಹುದು ಎಂದರು. ಮತ್ತೆ ಆರ್‌.ಅಶೋಕ ಪ್ರಶ್ನಿಸಿದಾಗ, ಸಿಎಂ ಸಿದ್ದರಾಮಯ್ಯ ಎದ್ದುನಿಂತು ಕಾನೂನು ಸಚಿವರು ಶುಕ್ರವಾರ ಮಂಡಿಸಲಿದ್ದಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೆಲ್ಫಿ& ಶೇಕ್‌ಹ್ಯಾಂಡ್‌ಗೆ 10 ಲಕ್ಷ : ಇಂಡಿಯಾ ಟೂರ್ ಮಾಡಿದ ಮೆಸ್ಸಿಗೆ ಆಯೋಜಕರು ಕೊಟ್ಟಿದ್ದು ಎಷ್ಟು ಕೋಟಿ
ರೈಲು ಪ್ರಯಾಣಿಕರಿಗೆ ಶಾಕ್, ಡಿಸೆಂಬರ್ 26ರಿಂದ ಟಿಕೆಟ್ ದರ ಹೆಚ್ಚಳ ಘೋಷಿಸಿದ ಭಾರತೀಯ ರೈಲ್ವೇ