ಮ. ಪ್ರ.ದಲ್ಲಿ ಜ್ಯೋತಿರಾದಿತ್ಯರನ್ನು ಬಿಟ್ಟು ಕಮಲ್‌ನಾಥ್‌ಗೆ ಮಣೆ ಹಾಕಿದ್ಯಾಕೆ?

Published : Dec 18, 2018, 12:37 PM IST
ಮ. ಪ್ರ.ದಲ್ಲಿ ಜ್ಯೋತಿರಾದಿತ್ಯರನ್ನು ಬಿಟ್ಟು ಕಮಲ್‌ನಾಥ್‌ಗೆ ಮಣೆ ಹಾಕಿದ್ಯಾಕೆ?

ಸಾರಾಂಶ

ಮಧ್ಯ ಪ್ರದೇಶ ಸಿಎಂ ಆಗಿ ಕಮಲನಾಥ್ ಆಯ್ಕೆ | ಜ್ಯೋತಿರಾದಿತ್ಯರನ್ನು ಬಿಟ್ಟು ಕಮಲ್‌ನಾಥ್‌ರನ್ನು ಆಯ್ಕೆ ಮಾಡಲು ಕಾರಣವೇನು? ಲೋಕಸಭಾ ಚುನಾವಣೆ ಮುಂದಿಟ್ಟುಕೊಂಡು ಕಮಲ್‌ನಾಥ್ ಆಯ್ಕೆ ಮಾಡಿದ್ರಾ? 

ನವದೆಹಲಿ (ಡಿ. 18): ಮಧ್ಯಪ್ರದೇಶಕ್ಕೆ ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವ ಬಗ್ಗೆ ರಾಹುಲ್‌ಗೆ ಹೆಚ್ಚು ಗೊಂದಲವಿದ್ದಂತೆ ಕಾಣಲಿಲ್ಲ. ಜ್ಯೋತಿರಾದಿತ್ಯ ಸಿಂಧಿಯಾ ಅವರು ಸೋನಿಯಾ ಮತ್ತು ಪ್ರಿಯಾಂಕಾ ಬಳಿ ಹೋಗಿ ಸ್ವಲ್ಪ ಲಾಬಿ ನಡೆಸಿದರಾದರೂ ಮಧ್ಯಪ್ರದೇಶದಲ್ಲಿ ದಿಗ್ವಿಜಯ್ ಸಿಂಗ್ ಮತ್ತು ದಿಲ್ಲಿಯಲ್ಲಿ ಅಹ್ಮದ್ ಪಟೇಲ್ ಆದಿಯಾಗಿ ಸೀನಿಯರ್ಸ್‌ಗಳು ‘ಕಮಲನಾಥ್‌ಗೆ ಒಂದು ಅವಕಾಶ ಸಿಗಬೇಕು. ಜ್ಯೋತಿರಾದಿತ್ಯ ಸಿಟ್ಟಿನ ಸ್ವಭಾವದವರು.

ಮಧ್ಯಪ್ರದೇಶದ ಸಿಎಂ ಇಂದಿರಾ ಗಾಂಧಿಯವರ 3 ನೇ ಪುತ್ರ!

ಲೋಕಸಭೆ ಚುನಾವಣೆಯೊಳಗೆ ಹೆಸರು ಕೆಡಿಸಿಕೊಂಡರೆ ಕಷ್ಟ ಎಂಬ’ ಎಂಬ ತರ್ಕ ಮುಂದಿಟ್ಟರು. ಆಗ ರಾಹುಲ್ ಕಮಲನಾಥ್ ಹೆಸರಿಗೆ ಓಕೆ ಅಂದು ಉಪ ಮುಖ್ಯಮಂತ್ರಿ ಆಗುತ್ತೀಯಾ ಎಂದು ಜ್ಯೋತಿರಾದಿತ್ಯಗೆ ಕೇಳಿದ್ದಾರೆ. ಗ್ವಾಲಿಯರ್ ಮಹಾರಾಜರು ಮತ್ತೊಬ್ಬರ ಕೈಕೆಳಗೆ ಕೆಲಸ ಮಾಡುವುದುಂಟೇ ಎಂದು ಜ್ಯೋತಿರಾದಿತ್ಯ ಒಲ್ಲೆ ಎಂದಿದ್ದಾರೆ. ಜ್ಯೋತಿರಾದಿತ್ಯ ಜನಸಾಮಾನ್ಯರಿಗೆ ಇಷ್ಟ, ಆದರೆ ಕಾರ್ಯಕರ್ತರಿಗೆ ಅಪಥ್ಯ. ಥೇಟ್ ರಾಜಸ್ಥಾನದ ಬಿಜೆಪಿ ನೊಗ ಹೊತ್ತಿರುವ ತನ್ನ ಸೋದರ ಅತ್ತೆಯಂತೆ.

- ಪ್ರಶಾಂತ್ ನಾತು, ಸುವರ್ಣನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣ ಸುದ್ದಿಗಾಗಿ  ಇಂಡಿಯಾ ಗೇಟ್  ಕ್ಲಿಕ್ ಮಾಡಿ 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!
ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಕೋಕಾ ಕೋಲಾ ಕಂಪನಿ ಚಾರ್ಟೆಡ್ ಅಕೌಂಟೆಂಟ್ ಹಠಾತ್ ಸಾವು