ದರ್ಶನ್ ಮುನಿಸಿಗೆ ಕಿಚ್ಚನ ಮೌನ!

Published : Mar 06, 2017, 08:57 AM ISTUpdated : Apr 11, 2018, 12:47 PM IST
ದರ್ಶನ್ ಮುನಿಸಿಗೆ ಕಿಚ್ಚನ ಮೌನ!

ಸಾರಾಂಶ

ಚಂದನವನದ ಕುಚಿಕು ಗೆಳೆಯರೆಂದೇ ಖ್ಯಾತಿ ಪಡೆದ ದರ್ಶನ್ ಹಾಗೂ ಸುದೀಪ್ ನಡುವೆ ಈಗ ಕಂದಕವೇರ್ಪಟ್ಟಿದೆ. 2002ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಮೆಜೆಸ್ಟಿಕ್ ಸಿನಿಮಾ ಕುರಿತಾಗಿ ಸುದೀಪ್ ನೀಡಿದ ಹೇಳಿಕೆಯಿಂದ ಸಿಟ್ಟುಗೊಂಡಿರುವ ದರ್ಶನ್ 'ನಾವು ಇನ್ಮುಂದೆ ಗೆಳೆಯರಲ್ಲ' ಎಂದು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು(ಮಾ.06): ಚಂದನವನದ ಕುಚಿಕು ಗೆಳೆಯರೆಂದೇ ಖ್ಯಾತಿ ಪಡೆದ ದರ್ಶನ್ ಹಾಗೂ ಸುದೀಪ್ ನಡುವೆ ಈಗ ಕಂದಕವೇರ್ಪಟ್ಟಿದೆ. 2002ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಮೆಜೆಸ್ಟಿಕ್ ಸಿನಿಮಾ ಕುರಿತಾಗಿ ಸುದೀಪ್ ನೀಡಿದ ಹೇಳಿಕೆಯಿಂದ ಸಿಟ್ಟುಗೊಂಡಿರುವ ದರ್ಶನ್ 'ನಾವು ಇನ್ಮುಂದೆ ಗೆಳೆಯರಲ್ಲ' ಎಂದು ಟ್ವೀಟ್ ಮಾಡಿದ್ದಾರೆ.

ಸ್ಯಾಂಡಲ್'ವುಡ್'ನ ಈ ಅಪೂರ್ವ ಗೆಳೆಯರ ನಡುವಿನ ಈ ಕಿಚ್ಚು ಕರ್ನಾಟಕದಾದ್ಯಂತ ಭಾರೀ ಚರ್ಚೆಗೀಡಾಗಿದೆ. ಅಲ್ಲದೇ ಅಭಿಮಾನಿಗಳಿಗೂ ಶಾಕ್ ನೀಡಿದಂತಾಗಿದೆ. ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ನಟರಿಬ್ಬರ ಪ್ರತಿಕ್ರಿಯೆ ಪಡೆಯಲು ಮಾಧ್ಯಮದವರು ಹರಸಾಹಸ ಪಟ್ಟಿದ್ದಾರೆ. ಮಾಧ್ಯಮವರ್ಗದ ಪ್ರಶ್ನೆಗೆ ನಟ ದರ್ಶನ್ ಉತ್ತರಿಸಿದ್ದಾರೆ. ಆದರೆ ಕಿಚ್ಚ ಸುದೀಪ್ ಮಾತ್ರ ಈ ಕುರಿತಾಗಿ ಮಾತನಾಡದೆ 'ನೋ ಕಮೆಂಟ್ಸ್' ಎಂದು ಮೌನವಾಗಿ ತೆರಳಿದ್ದಾರೆ.

'ಹೆಬ್ಬುಲಿ' ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಈ ಹಿನ್ನೆಲೆಯಲ್ಲಿ ನಟ ಸುದೀಪ್ ತುಮಕೂರಿಗೆ ತೆರಳಿದ್ದರು. ಈ ವೇಳೆ ಸಿನಿಮಾ ಕುರಿತಾಗಿ ಮಾಧ್ಯಮ ಮಂದಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಸುದೀಪ್ ಬಳಿ ಪತ್ರಕರ್ತರೊಬ್ಬರು ದರ್ಶನ್ ಕುರಿತಾಗಿ ಕೇಳಲು ಮುಂದಾದರು. ಆದರೆ ದರ್ಶನ್ ಹೆಸರು ಕೇಳುತ್ತಿದ್ದಂತೆಯೇ, ಸುದೀಪ್ 'ನೋ ಕಾಮೆಂಟ್ಸ್' ಎಂದು ಪತ್ರಕರ್ತನ ಪ್ರಶ್ನೆಯನ್ನು ಸಂಪೂರ್ಣವಾಗಿ ಕೇಳದೆ ತೆರಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಲ್ಲೂರು ದೇವಳ ಹೆಸರಲ್ಲಿ ನಕಲಿ ವೆಬ್‌ಸೈಟ್: ಭಕ್ತರಿಗೆ ವಂಚಿಸುತ್ತಿದ್ದ ಆರೋಪಿ ನಾಸೀರ್ ಹುಸೇನ್ ಬಂಧನ
ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ