
ದುಬೈ(ಮಾ.06): ಇಲ್ಲಿನ ಸರಕು ಸಾಗಣೆ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀರಾಜ್ ಕೃಷ್ಣನ್ ಎಂಬ ಕೇರಳ ಮೂಲದ ವ್ಯಕ್ತಿಯೊಬ್ಬರು ಭರ್ಜರಿ 12 ಕೋಟಿ ರೂಪಾಯಿ ಲಾಟರಿ ಗೆದ್ದಿದ್ದಾರೆ.
ದುಬೈನಲ್ಲಿ ಭಾರೀ ಬಹುಮಾನಕ್ಕೆ ಹೆಸರಾಗಿರುವ ‘ಬಿಗ್ ಟಿಕೆಟ್’ನಲ್ಲಿ ಲಾಟರಿ ಟಿಕೆಟ್ ಕೊಳ್ಳುವ ಹವ್ಯಾಸ ಹೊಂದಿದ್ದ ಕೃಷ್ಣನ್'ಗೆ ಇದುವರೆಗೆ ಎಂದೂ ಬಹುಮಾನ ಬಂದಿರಲಿಲ್ಲ. ಇದೇ ಕೊನೆ ಬಾರಿ ಎಂದು ಅವರು ಕೊಂಡಿದ್ದ ಟಿಕೆಟ್'ಗೆ ಇದೀಗ 12 ಕೋಟಿ ರೂಪಾಯಿ ಬಹುಮಾನ ಬಂದಿದೆ.
ಕೃಷ್ಣನ್'ಗೆ ಇಲ್ಲಿ ಮಾಸಿಕ 1 ಲಕ್ಷ ರೂಪಾಯಿ ವೇತನ ಇದ್ದು, ಅವರ ಪತ್ನಿ ಕೂಡಾ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಾಟರಿ ಹಣದಿಂದ ಕೇರಳದಲ್ಲಿ ಮನೆ ಕಟ್ಟಿಸಲು ಪಡೆದಿದ್ದ ಸಾಲವನ್ನು ಮೊದಲು ಮರುಪಾವತಿ ಮಾಡುತ್ತೇನೆ. ಭಾರೀ ಲಾಟರಿ ಹೊಡೆದಿದ್ದರೂ, ಮುಂದೆಯೂ ದುಬೈನಲ್ಲೇ ಕೆಲಸ ಮಾಡುವುದಾಗಿ ಕೃಷ್ಣನ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.