ಸಾಮಾಜಿಕ ಕಾರ್ಯಕರ್ತ ರವಿಕೃಷ್ಣ ರೆಡ್ಡಿ ಬಂಧನ

By Suvarna Web DeskFirst Published Mar 14, 2018, 8:10 PM IST
Highlights

ಜಗಳ ತಾರಕಕ್ಕೇರಿದ್ದ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

ಬೆಂಗಳೂರು(ಮಾ.14): ಸಾಮಾಜಿಕ ಕಾರ್ಯಕರ್ತ ರವಿಕೃಷ್ಣ ರೆಡ್ಡಿ ಅವರನ್ನು ಸದ್ದಗುಂಟೆ ಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಠಾಣೆಗೆ ಇನ್ಸ್'ಪೆಕ್ಟರ್ ಕರೆದೊಯ್ದಿದ್ದಾರೆ.

ಪಡಿತರ ಚೀಟಿ ವಿಷಯಕ್ಕೆ ಸಂಬಂಧಿಸಿದಂತೆ  ಇಂದು ಮಂಜುನಾಥ್ ರೆಡ್ಡಿ ಹಾಗೂ ರವಿಕೃಷ್ಣ ರೆಡ್ಡಿ ವಾಗ್ವಾದ ನಡೆಸಿದ್ದರು. ಜಗಳ ತಾರಕಕ್ಕೇರಿದ್ದ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

click me!