
ಬೆಂಗಳೂರು(ಡಿ.13): ಸಹೋದ್ಯೋಗಿಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಹಾಯ್ ಬೆಂಗಳೂರು ವಾರಪತ್ರಿಕೆಯ ಸಂಪಾದಕ ರವಿ ಬೆಳಗೆರೆಗೆ ಸಿವಿಲ್ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಅನಾರೋಗ್ಯವಿರುವದರಿಂದ ಚಿಕಿತ್ಸೆ ಅಗತ್ಯವಿದ್ದು ಜಾಮೀನು ನೀಡಬೇಕೆಂದು ಬೆಳಗೆರೆ ಪರ ವಕೀಲರಾದ ದಿವಾಕರ್ ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟ ನಂತರ ಜಾಮೀನು ನೀಡಲಾಗಿದೆ.
ಇಬ್ಬರ ಶೂರಿಟಿ ಹಾಗೂ 1 ಲಕ್ಷ ರೂ. ಬಾಂಡ್'ನೊಂದಿಗೆ ಜಮೀನು ನೀಡಲಾಗಿದ್ದು, ಸಾಕ್ಷಿ ನಾಶಪಡಿಸದಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಜಾಮೀನು ಅವಧಿ ಡಿ.16 ಅಂದರೆ 3 ಅವಧಿಗಳ ಕಾಲ ಅನ್ವಯವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.