'ಕೊಡಗಿಗಾಗಿ ರಂಗಸಪ್ತಾಹ' ಸಂಗೀತ ಜಾತ್ರೆಗೆ ಬನ್ನಿ ನಿಮ್ಮವರನ್ನು ಕರೆತನ್ನಿ

Published : Nov 02, 2018, 09:18 PM ISTUpdated : Nov 02, 2018, 09:51 PM IST
'ಕೊಡಗಿಗಾಗಿ ರಂಗಸಪ್ತಾಹ' ಸಂಗೀತ ಜಾತ್ರೆಗೆ ಬನ್ನಿ ನಿಮ್ಮವರನ್ನು ಕರೆತನ್ನಿ

ಸಾರಾಂಶ

 ಕೊಡಗಿನೆಡೆಗೆ ಹರಿಯುತ್ತಿರುವ ಮನುಷ್ಯತ್ವವನ್ನು ಸದಾ ಜಾಗೃತವಾಗಿಡಲು ನಿರಾಶ್ರಿತರ ಮಕ್ಕಳಿಗೆ ಸಹಾಯ ಹಸ್ತ ಚಾಚುವ ಸಲುವಾಗಿ 'ಕೊಡಗಿಗಾಗಿ ರಂಗಸಪ್ತಾಹ' ಶಪತವೊಂದು ಮಾಡಿದೆ.

ಬೆಂಗಳೂರು, [ನ.02]: ಕೊಡಗಿನ ಪ್ರವಾಹ ಸಂತ್ರಸ್ತರ ನೆರವಿಗಾಗಿ ಈಗಾಗಲೇ ಸಾವಿರಾರೂ ಮನಗಳು ಮಿಡಿದಿವೆ.

ಮೆಡಿಕಲ್ ಕಿಟ್ ಅಭಿಯಾನ, ಗ್ಯಾಸ್ ಗೀಸರ್ ಅಭಿಯಾನ, ಇ-ಟಾಯ್ಲೆಟ್ ಅಭಿಯಾನ ಸೇರಿಂದತೆ ಇನ್ನು ಹಲವು ಅಭಿಯಾನಗಳು ಕೊಡಗಿನ ಮರು ನಿಮಾರ್ಣದ ಹಾದಿಗೆ ಮುನ್ನುಡಿ ಬರೆದಿವೆ.

ಇದೀಗ ಕೊಡಗಿನೆಡೆಗೆ ಹರಿಯುತ್ತಿರುವ ಮನುಷ್ಯತ್ವವನ್ನು ಸದಾ ಜಾಗೃತವಾಗಿಡಲು ನಿರಾಶ್ರಿತರ ಮಕ್ಕಳಿಗೆ ಸಹಾಯ ಹಸ್ತ ಚಾಚುವ ಸಲುವಾಗಿ 'ಕೊಡಗಿಗಾಗಿ ರಂಗಸಪ್ತಾಹ' ಶಪತವೊಂದು ಮಾಡಿದೆ.

'ಕೊಡಗಿಗಾಗಿ ರಂಗಸಪ್ತಾಹ' ಮೂಲಕ ಇದೇ ನವೆಂಬರ್ 11ರಿಂದ ನ.16ರ ವರೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಸಂಗೀತಾ ಜಾತ್ರೆ ಮತ್ತು ನಿರಾಶ್ರಿತರೊಂದಿಗೆ ಮಾತುಕತೆಗೆ ಸಿದ್ಧವಾಗಿದೆ. 

ಈ 'ಕೊಡಗಿಗಾಗಿ ರಂಗಸಪ್ತಾಹ'ದಲ್ಲಿ ಸಂಗೀತ ಜಾತ್ರೆ ಇರಲಿದೆ. ಅಂದರೆ, ಜಾನಪದ ಗೀತೆ, ವಚನ ವಿಶೇಷ, ಅನುಭಾವಿ ಗೀತೆಗಳು, ಸುಗಮ ಸಂಗೀತ ಗಾಯನ, ಗಝಲ್ ಇರಲಿದೆ.

ಆರು ದಿನಗಳ ವರೆಗೆ ನಡೆಯುವ ಕೊಡಗಿಗಾಗಿ ರಂಗಸಪ್ತಾಹದ ಮೊದಲ ದಿನದ ಉದ್ಘಾಟನೆಯನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂನಾಥ ಮಹಾಸ್ವಾಮೀಜಿ ಮಾಡಲಿದ್ದಾರೆ.

 ಕೊಡಗಿಗಾಗಿ ರಂಗಸಪ್ತಾಹ ಸಂಗೀತ ಜಾತ್ರೆಗೆ ನೀವೂ ಬನ್ನಿ, ನಿಮ್ಮವರನ್ನು ಕರೆತನ್ನಿ.

ಇದರ ಬಗ್ಗೆ ಇನ್ನಷ್ಟು ಮಾಹಿತಿ ಬೇಕಿದ್ದಲ್ಲಿ ಅಥವಾ ಎನಾದರು ಈ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕಿದ್ದರೆ 9008033336, 9900008002,8748003718 ಈ ನಂಬರ್ ಗೆ ಕರೆ ಮಾಡಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

HD Kumaraswamy birthday: ಎಚ್‌ಡಿಕೆಗೆ  ₹3.50 ಲಕ್ಷದ 25 ಗ್ರಾಂನ ಚಿನ್ನದ ಸರ ಕೊಟ್ಟ ಅಭಿಮಾನಿ!
ಆಜಾನ್‌ ಚರ್ಚೆ ವೇಳೆ ದೀಪಾವಳಿ ಪಟಾಕಿ ವಿಚಾರ ಎತ್ತಿದ ಖಂಡ್ರೆ Congress-BJP ನಡುವೆ ಗದ್ದಲ