
ಹರಿದ್ವಾರ(ಡಿ.15): ಪತಂಜಲಿ ಉತ್ಪನ್ನಗಳ ಬಗ್ಗೆ ತಪ್ಪಾಗಿ ಜಾಹಿರಾತು ನೀಡಿದ ಯೋಗಗುರು ರಾಮದೇವ್ ಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ 11 ಲಕ್ಷ ರೂ. ದಂಡವನ್ನು ವಿಧಿಸಿದೆ.
ಉತ್ಪನ್ನಗಳನ್ನು ಬೇರೆ ಕಡೆ ತಯಾರಿಸಿ ತನ್ನ ಸ್ವಂತ ಉತ್ಪಾದನಾ ಘಟಕದಲ್ಲಿ ತಯಾರಿಸಿದ್ದೆಂದು ಲೇಬಲ್ ಅಂಟಿಸಿ ಮಾರಾಟ ಮಾಡಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
ಪತಂಜಲಿ ತಯಾರಿಸಿದ ಸಾಸಿವೆ ಎಣ್ಣೆ, ಉಪ್ಪು, ಪೈನಾಪಲ್ ಜಾಮ್, ಜೇನುತುಪ್ಪದ ಗುಣಮಟ್ಟವನ್ನು ರುದ್ರಾಪುರ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಗುಣಮಟ್ಟದ ಕೊರತೆ ಇತ್ತು. ಹಾಗಾಗಿ ಜಿಲ್ಲಾ ಆಹಾರ ಭದ್ರತಾ ಇಲಾಖೆ 2012 ರಲ್ಲಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿತ್ತು.
ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಲಲಿತ್ ನಾರಾಯಣ್ ಮಿಶ್ರಾ ಒಂದು ತಿಂಗಳೊಳಗೆ 5 ಲಕ್ಷ ರೂ. ದಂಡವನ್ನು ಪಾವತಿಸಬೇಕೆಂದು ಆದೇಶಿಸಿದ್ದಾರೆ.
ಉತ್ಪನ್ನವು ಸೆಕ್ಷನ್ 52-53 (ಆಹಾರ ಭದ್ರತಾ ಗುಣಮಟ್ಟ), ಸೆಕ್ಷನ್ 23.1 (5) ಆಹಾರ ಭದ್ರತೆ ಮತ್ತು ಗುಣಮಟ್ಟ (ಪ್ಯಾಕೇಜಿಂಗ್ ಮತ್ತು ಲೇಬಲಿಂಗ್) ಕಾಯ್ದೆಯನ್ನು ಉಲ್ಲಂಘಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.