ನುಚ್ಚು ನೂರಾಯ್ತು ಪಿಯುಸಿ ವಿದ್ಯಾರ್ಥಿನಿಯ ಕನಸಿನ ಗೋಪುರ

Published : Aug 13, 2018, 07:41 PM ISTUpdated : Sep 09, 2018, 08:33 PM IST
ನುಚ್ಚು ನೂರಾಯ್ತು ಪಿಯುಸಿ ವಿದ್ಯಾರ್ಥಿನಿಯ ಕನಸಿನ ಗೋಪುರ

ಸಾರಾಂಶ

ಕಾಲೇಜು ಶಿಕ್ಷಣ ಪೂರೈಸಿ ಉನ್ನತ ಉದ್ಯೋಗ ಪಡೆಯಬೇಕೆಂಬ ಕನಸು. ಕಷ್ಟಪಟ್ಟು ಓದಿಸಿದ ಪೋಷಕರನ್ನ ಚೆನ್ನಾಗಿ ನೋಡಿಕೊಳ್ಳಬೇಕೆಂಬ ಬಯಕೆ. ಹೀಗೆ ಸಾಕಷ್ಟು ಕನಸುಗಳನ್ನ ಹೊತ್ತು ಕಾಲೇಜಿಗೆ ಕಾಲಿಟ್ಟ ವಿದ್ಯಾರ್ಥಿನಿ ತನ್ನ ಬದುಕಿಗೆ ಪೂರ್ಣ ವಿರಾಮ ಹಾಕಿದ್ದಾಳೆ. ಅಷ್ಟಕ್ಕೂ ಪಿಯುಸಿ ವಿದ್ಯಾರ್ಥಿನಿಯ ಕನಸಿನ ಗೋಪುರ ನುಚ್ಚು ನೂರಾಗಿದ್ದೇಗೆ? ಇಲ್ಲಿದೆ.  

ಕೋಲಾರ(ಆ.13): ಓದಿನಲ್ಲಿ ಮುಂದಿದ್ದಳು, ಶೈಕ್ಷಣಿಕ ಚಟುವಟಿಗಳಲ್ಲೂ ಆಕೆ ಚುರುಕಿನ ವಿದ್ಯಾರ್ಥಿ. ಶಾಲಾ-ಕಾಲೇಜು ಪರೀಕ್ಷೆಗಳಲ್ಲೂ ಆಕೆ ಪಾಸ್. ಆದರೆ ಬದುಕನ್ನ ಎದುರಿಸುವಲ್ಲಿ ಆಕೆ ಎಡವಿದಳು. ಇದು ಕೋಲಾರ ಜಿಲ್ಲೆಯ ಡಿಸಿ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿನಿಯ ಕತೆ.

ಕಾಲೇಜಿನಲ್ಲಿ ಯುವಕರಿಂದ ಮಾಸಿಕ ಕಿರುಕುಳ್ಕಕ್ಕೆ ಒಳಗಾದ ಪಿಯುಸಿ ವಿದ್ಯಾರ್ಥಿನಿ ನೇಣುಬಿಗುದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಿಲ್ಲೆಯ ಕೆಜಿಎಪ್ ನಗರದ ಇಟಿ ಬ್ಲಾಕ್‌ನಲ್ಲಿ ಘಟನೆ ನಡೆದಿದೆ.

ಬಂಗಾರಪೇಟೆ ಡಿಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಗೆ, ಅದೇ ಕಾಲೇಜಿನಲ್ಲಿ ಓದುತ್ತಿದ್ದ ಯುವಕರ ಗುಂಪು ಮಾನಸಿಕ ಕಿರುಕುಳ ನೀಡುತಿತ್ತು ಅನ್ನೋ ಆರೋಪ ಕೇಳಿಬಂದಿದೆ. ಮಾನಸಿಕ ಕಿರುಕುಳದಿಂದ ಬೇಸತ್ತ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

ವಿದ್ಯಾರ್ಥಿನಿ ಸಾವಿನ ಹಿನ್ನೆಲೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಆಡಳಿತ‌ ಮಂಡಳಿಯಿಂದ ಸಂತಾಪ ಸೂಚಿಸಲಾಯಿತು. ಮಗಳನ್ನ ಕಳೆದುಕೊಂಡ ಪೋಷಕರ ಅಳಲು ಮುಗಿಲು ಮುಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಂಗಳೂರು: ತಿಂಡಿ ಎಸೆದು ಪಾತ್ರೆಯಿಂದ ಹಲ್ಲೆ ಮಾಡಿದ ಪುಂಡರಿಗೆ ಕುದಿಯುವ ಎಣ್ಣೆ ಎರಚಿದ ವ್ಯಾಪಾರಿ!
ಅಪರೂಪದ ಕೋತಿ ಪ್ರಭೇದ ಬ್ಯಾಗ್‌ನಲ್ಲಿಟ್ಟು ವಿದೇಶದಿಂದ ಅಕ್ರಮ ಸಾಗಾಟ, ಬೆಂಗಳೂರು ಏರ್ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ!