
ಇಡೀ ನಾಡೇ ದೀಪಾವಳಿ ಸಂಭ್ರಮದಲ್ಲಿದ್ರೆ ಗೃಹ ಸಚಿವ ರಾಮಲಿಂಗಾರೆಡ್ಡಿ ಕುಟುಂಬಕ್ಕೆ ಮಾತ್ರ ಸಂಭ್ರಮಿಸೋ ಭಾಗ್ಯವಿಲ್ಲ. ಅದರಲ್ಲೂ ಪಟಾಕಿ ಅಂದ್ರೆ ಸಾಕು ರಾಮಲಿಂಗಾರೆಡ್ಡಿ ಬೆಚ್ಚಿ ಬೀಳ್ತಾರೆ. ದೀಪಾವಳಿ ಅಂದ್ರೆ ಭಯ ಕಾಡುತ್ತೆ. ಇದಕ್ಕೂ ಕಾರಣವಿದೆ 2000 ನೇ ಇಸ್ವಿಯಲ್ಲಿ ಮನೆಯಲ್ಲಿಟ್ಟ ಪಟಾಕಿಗೆ ಬೆಂಕಿ ತಗುಲಿ ರಾಮಲಿಂಗಾರೆಡ್ಡಿ ತಂದೆ ಸಾವನ್ನಪ್ಪಿದ್ದರು.ಆ ಕರಾಳ ನೆನಪು ಗೃಹ ಸಚಿವರ ಕುಟುಂಬವನ್ನ ಇನ್ನೂ ಬಿಡದಂತೆ ಕಾಡ್ತಿದೆ.ಹಾಗಾಗಿ ಗೃಹ ಸಚಿವರ ಮನೆಯಲ್ಲಿ ದೀಪಾವಳಿ ಸಡಗರವಿಲ್ಲ. ಜೊತೆಗೆ ಪಟಾಕಿ ಹೊಡೆಯೋದು ಬೇಡ ಅನ್ನೋ ಮನವಿಯನ್ನು ಮಾಡಲು ರಾಮಲಿಂಗಾರೆಡ್ಡಿ ಮರೆಯಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.