ಅಗ್ನಿ ಶ್ರೀಧರ್ ಕೊರಳಿಗೆ ಮತ್ತೆ ಸುತ್ತಿಕೊಳ್ಳಲಿದೆ ಕೋತ್ವಾಲ್ ಪ್ರಕರಣ?

Published : Mar 30, 2017, 04:07 PM ISTUpdated : Apr 11, 2018, 12:42 PM IST
ಅಗ್ನಿ ಶ್ರೀಧರ್ ಕೊರಳಿಗೆ ಮತ್ತೆ ಸುತ್ತಿಕೊಳ್ಳಲಿದೆ ಕೋತ್ವಾಲ್ ಪ್ರಕರಣ?

ಸಾರಾಂಶ

ಕೊತ್ವಾಲ್ ರಾಮಚಂದ್ರ ಕೊಲೆ ಪ್ರಕರಣದ ವಿಚಾರಣೆ ಮತ್ತೆ ಶುರುವಾಗಿದ್ದು ಅಗ್ನಿ ಶ್ರೀಧರ್ ಖುಲಾಸೆಯಾಗಿದ್ದ ಪ್ರಕರಣಕ್ಕೆ ಮರುಜೀವ ಬಂದಂತಾಗಿದೆ.  ಅಗ್ನಿ ಶ್ರೀಧರ್​ ಕೊರಳಿಗೆ ಮತ್ತೆ ಸುತ್ತಿಕೊಳ್ಳಲಿದೆ ಹಳೆ ಕೇಸು. ಡಿಜಿ ಆರ್​.ಕೆ. ದತ್ತ ಭೇಟಿ ವೇಳೆ ನೀಡಿದ್ದ ಲಿಖಿತ ಹೇಳಿಕೆಯಲ್ಲಿ ಕೊತ್ವಾಲ್ ಕೊಲೆ  ಕೇಸ್​ನಲ್ಲಿ ಭಾಗಿಯಾಗಿದ್ದೆ ಎಂಬ ಹೇಳಿಕೆ ಅಗ್ನಿ ಶ್ರೀಧರ್ ಗೆ ಸಮಸ್ಯೆ ತಂದೊಡ್ಡಿದೆ.

ಬೆಂಗಳೂರು (ಮಾ.30): ಕೊತ್ವಾಲ್ ರಾಮಚಂದ್ರ ಕೊಲೆ ಪ್ರಕರಣದ ವಿಚಾರಣೆ ಮತ್ತೆ ಶುರುವಾಗಿದ್ದು ಅಗ್ನಿ ಶ್ರೀಧರ್ ಖುಲಾಸೆಯಾಗಿದ್ದ ಪ್ರಕರಣಕ್ಕೆ ಮರುಜೀವ ಬಂದಂತಾಗಿದೆ.  ಅಗ್ನಿ ಶ್ರೀಧರ್​ ಕೊರಳಿಗೆ ಮತ್ತೆ ಸುತ್ತಿಕೊಳ್ಳಲಿದೆ ಹಳೆ ಕೇಸು.
ಡಿಜಿ ಆರ್​.ಕೆ. ದತ್ತ ಭೇಟಿ ವೇಳೆ ನೀಡಿದ್ದ ಲಿಖಿತ ಹೇಳಿಕೆಯಲ್ಲಿ ಕೊತ್ವಾಲ್ ಕೊಲೆ  ಕೇಸ್​ನಲ್ಲಿ ಭಾಗಿಯಾಗಿದ್ದೆ ಎಂಬ ಹೇಳಿಕೆ ಅಗ್ನಿ ಶ್ರೀಧರ್ ಗೆ ಸಮಸ್ಯೆ ತಂದೊಡ್ಡಿದೆ.

ಏನಿದು ಕೊತ್ವಾಲ್, ಅಗ್ನಿ ಶ್ರೀಧರ್ ಪ್ರಕರಣ..?
ಮಾ. 22, 1986ರಲ್ಲಿ  ತುಮಕೂರಿನಲ್ಲಿ ಕೊತ್ವಾಲ ರಾಮಚಂದ್ರನ‌  ಕೊಲೆಯಾಗಿತ್ತು. ಈ ಕೊಲೆ ಇಡೀ ಬೆಂಗಳೂರನ್ನೇ ನಡುಗಿಸಿತ್ತು. ಈ ಕೊಲೆ ಪ್ರಕರಣದಲ್ಲಿ ಅಗ್ನಿ ಶ್ರೀಧರ್ ಮತ್ತು ಬಚ್ಚನ್ ಆರೋಪಿಗಳಾಗಿದ್ದರು. ಇದನ್ನು ಶ್ರೀಧರ್, ಹಲವು ಕಡೆ ಹೇಳಿಕೊಂಡಿದ್ದರೂ, ಕೋರ್ಟ್​ನಲ್ಲಿ ಮಾತ್ರ ಅದು ಋಜುವಾತಾಗಿರಲಿಲ್ಲ. ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಯಾಗಿದ್ದರು. ಆದರೆ, ಈ ಪ್ರಕರಣಕ್ಕೆ ಈಗ ಮರುಜೀವ ಸಿಗುವ ಸಾಧ್ಯತೆ ಇದೆ.

ಇತ್ತೀಚೆಗೆ ತಮ್ಮ ಮನೆ ಮೇಲೆ ದಾಳಿ ನಡೆಸಿದ್ದರ ಕುರಿತಂತೆ ಡಿಜಿ ಆರ್​.ಕೆ. ದತ್ತಾ ಅವರನ್ನು ಭೇಟಿಯಾಗಿದ್ದ ಶ್ರೀಧರ್, ತಾನು ಬದಲಾಗಿದ್ದೇನೆ, ರೌಡಿಸಂ ಬಿಟ್ಟಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಅದೇ ಲಿಖಿತ ಹೇಳಿಕೆಯಲ್ಲಿ 1986ರ ಕೊತ್ವಾಲ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದೆ ಎಂಬ ಉಲ್ಲೇಖವೂ ಇದೆ. ಈ ಹಿನ್ನೆಲೆಯಲ್ಲಿ 1986ರ ಕೊತ್ವಾಲ್ ಮರ್ಡರ್ ಕೇಸ್​ನ್ನು ರೀ-ಓಪನ್ ಮಾಡುವುದಾಗಿ ಪೊಲೀಸರು ಹೇಳಿದ್ದಾರೆ. ಬೆಂಗಳೂರು ಪೊಲೀಸ್ ಕಮಿಷನರ್ ಪ್ರವೀಣ್ ಸೂದ್, ಆ ಕೊಲೆ ಕೇಸ್​ನ್ನು ಮತ್ತೆ ತನಿಖೆಗೊಳಪಡಿಸುವ ಸೂಚನೆ ಕೊಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಟಲ್ ಬ್ಯಾನ್ ಮಾಡಿ ದೇಶಕ್ಕೆ ಮಾದರಿಯಾದ ಗಡಿಗ್ರಾಮ: ಪ್ರತಿನಿತ್ಯ ಮೊಬೈಲ್, ಟಿವಿ 2 ಗಂಟೆ ಬಂದ್!
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರ, ಇದು ಯೂನಸ್ ಸರ್ಕಾರದ ವ್ಯವಸ್ಥಿತ ಪಿತೂರಿ: ಶೇಖ್ ಹಸೀನಾ ಗಂಭೀರ ಆರೋಪ