
ಜೈಪುರ[ಏ.29]: ರೈಲಿನಿಂದ ಕೆಳಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಪ್ರಯಾಣಿಕನ ರಕ್ಷಣೆಗಾಗಿ ಲೋಕೋಪೈಲಟ್ ಒಬ್ಬರು ರೈಲನ್ನೇ ಒಂದು ಕಿ.ಮೀ ವಾಪಸ್ ಸಂಚರಿಸಿದ ಘಟನೆ ರಾಜಸ್ಥಾನದ ಕೋಟಾ-ಬಿನಾ ಮಾರ್ಗ ಮಧ್ಯೆ ನಡೆದಿದೆ. ಸಾಮಾನ್ಯವಾಗಿ ರೈಲಿನ ಅಪಘಾತಗಳು ಅಥವಾ ತುರ್ತು ಸಂದರ್ಭಗಳಲ್ಲಿ ಮಾತ್ರವೇ ರೈಲು ಪ್ರಯಾಣಿಕರು ಚೈನ್ ಎಳೆದು ರೈಲನ್ನು ನಿಲ್ಲಿಸಬಹುದಾಗಿದೆ. ಈ ವೇಳೆ, ಚೈನ್ ಎಳೆದ ಪ್ರಯಾಣಿಕನಿಗೆ ದಂಡ ವಿಧಿಸಲಾಗುತ್ತದೆ. ಆದರೆ, ಓರ್ವ ಪ್ರಯಾಣಿಕನ ರಕ್ಷಣೆಗಾಗಿ ರೈಲನ್ನು ವಾಪಸ್ ತಿರುಗಿಸುವ ಸಂಭವ ತೀರಾ ಕಡಿಮೆ.
ಆಗಿದ್ದೇನು?
ರಾಜಸ್ಥಾನದ ಕೋಟಾ-ಬಿನಾ ಮಾರ್ಗದ ರೈಲಿನಲ್ಲಿ ವಿನೋದ್ ವರ್ಮಾ, ರಾಜೇಂದ್ರ ವರ್ಮಾ ಹಾಗೂ ಸುರೇಶ್ ವರ್ಮಾ ಎಂಬ ಸಹೋದರರು ಪ್ರಯಾಣಿಸುತ್ತಿದ್ದರು. ಈ ಪೈಕಿ ರಾಜೇಂದ್ರ ವರ್ಮಾ ಮಾನಸಿಕ ಅಸ್ವಸ್ತನಾಗಿದ್ದ. ರೈಲು ಇಲ್ಲಿನ ಅಶೋಕ್ನಗರ ರೈಲ್ವೆ ನಿಲ್ದಾಣದಿಂದ ಹೊರಡುತ್ತಿದ್ದಂತೆ, ರಾಜೇಂದ್ರ ಎಂಬುವರು ರೈಲಿನಿಂದ ಹೊರಕ್ಕೆ ಧುಮುಕಿದ್ದರು. ಈ ವೇಳೆ ರೈಲಿನಿಂದ ಜಿಗಿದ ವಿನೋದ್, ರಾಜೇಂದ್ರನನ್ನು ರಕ್ಷಿಸಿದ್ದರು.
ಆ ನಂತರ, ಬಾರನ್ ಜಿಲ್ಲೆಯ ಸಾಲ್ಪುರ ಪ್ರದೇಶದಲ್ಲಿ ಮತ್ತೆ ರಾಜೇಂದ್ರ ಮತ್ತೆ ರೈಲಿನಿಂದ ಹೊರಕ್ಕೆ ಹಾರಿದ್ದ. ಆತನ ಹಿಡಿಯಲು ದುಂಬಾಲು ಬಿದ್ದಿದ್ದ ಅವರ ಸೋದರ ವಿನೋದ್ ವರ್ಮಾ ಕಾಲುಜಾರಿ ರೈಲಿನಿಂದ ಹೊರಬಿದ್ದು, ಗಾಯಗೊಂಡಿದ್ದ. ಅಲ್ಲದೆ, ರಾಜೇಂದ್ರ ಸಹ ಗಾಯಗೊಂಡಿದ್ದ. ಈ ವೇಳೆ ವಿನೋದ್ ರಕ್ಷಣೆಗಾಗಿ ಆ್ಯಂಬುಲೆನ್ಸ್ಗೆ ಕರೆ ಮಾಡಲಾಯಿತು. ಆದರೆ, ರೈಲ್ವೆ ಹಳಿಗಳ ಬಳಿ ಆ್ಯಂಬುಲೆನ್ಸ್ ಬರಲು ಯಾವುದೇ ಮಾರ್ಗವಿರಲಿಲ್ಲ. ಆಗ ಸಮಯಪ್ರಜ್ಞೆ ಮೆರೆದಿದ್ದ, ಲೋಕೋಪೈಲಟ್ ರೈಲನ್ನು ಬರೋಬ್ಬರಿ 1 ಕಿ. ಮೀ.ವರೆಗೆ ಹಿಮ್ಮುಖವಾಗಿ ತಂದು ಗಾಯಾಳುಗಳನ್ನು ಆಸ್ಪತ್ರೆಗೆ ಕರೆತಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.