ಮಳೆಗೆ ಮತ್ತೊಮ್ಮೆ ಮುಳುಗಿದ ಬೆಂಗಳೂರು: ಜನರ ನಿದ್ದೆಗೆ ತಣ್ಣೀರು ಎರಚಿದ ಮಳೆರಾಯ

Published : Aug 16, 2017, 09:44 AM ISTUpdated : Apr 11, 2018, 12:47 PM IST
ಮಳೆಗೆ ಮತ್ತೊಮ್ಮೆ ಮುಳುಗಿದ ಬೆಂಗಳೂರು: ಜನರ ನಿದ್ದೆಗೆ ತಣ್ಣೀರು ಎರಚಿದ ಮಳೆರಾಯ

ಸಾರಾಂಶ

ಮೊನ್ನೆ ತಡರಾತ್ರಿ 2 ಗಂಟೆಯಿಂದ ಸುರಿದ ದಾಖಲೆ ಮಳೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಬೆಂಗಳೂರು ನಗರದಲ್ಲೇ 13 ಸೆಂಟಿ ಮೀಟರ್ ಮಳೆಯಾಗಿದೆ. ನಿನ್ನೆ ರಾತ್ರಿ ಕೂಡ ಮತ್ತೆ ಅಲ್ಲಲ್ಲಿ ಮಳೆಯಾಗಿದ್ದು ನಿದ್ದೆಯಿಲ್ಲದೆ ಜನರು ಜಾಗರಣೆ ಮಾಡುವಂತಾಗಿದೆ.

ಬೆಂಗಳೂರು(ಆ.16): ಮೊನ್ನೆ ತಡರಾತ್ರಿ 2 ಗಂಟೆಯಿಂದ ಸುರಿದ ದಾಖಲೆ ಮಳೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಬೆಂಗಳೂರು ನಗರದಲ್ಲೇ 13 ಸೆಂಟಿ ಮೀಟರ್ ಮಳೆಯಾಗಿದೆ. ನಿನ್ನೆ ರಾತ್ರಿ ಕೂಡ ಮತ್ತೆ ಅಲ್ಲಲ್ಲಿ ಮಳೆಯಾಗಿದ್ದು ನಿದ್ದೆಯಿಲ್ಲದೆ ಜನರು ಜಾಗರಣೆ ಮಾಡುವಂತಾಗಿದೆ.

ಹೆಚ್'ಎಸ್'ಆರ್ ಲೇಔಟ್​, ಈಜಿಪುರದಲ್ಲಿ ತಡರಾತ್ರಿ ಮಳೆಯಾಗಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಪರದಾಡಿದರು. ಮನೆಯ ಒಳಗಡೆ ನೀರು ನಿಂತಿದ್ದು ನೀರು ಹೊರ ಹಾಕುವಲ್ಲಿಯೆ ಜನರು ರಾತ್ರಿ ಕಳೆದು ಬಿಬಿಎಂಪಿಗೆ ಹಿಡಿಶಾಪ ಹಾಕಿದ್ರು.

ತಡರಾತ್ರಿ ಸುರಿದ ಮಳೆಯಿಂದ ಕೋರಮಂಗಲದ ಎಸ್ ಡಿ ಬೆೇಡ್ ಬಡಾವಣೆಯ ಮನೆಗಳಿಗೆ ನೀರು ನುಗ್ಗಿತ್ತು. ಅಪಾರ್ಟ್ ಮೆಂಟ್ ವೊಂದರ ಬೇಸ್ ಮೆಂಟ್ ನಲ್ಲಿ ನೀರು ಶೇಖರಣೆಗೊಂಡು ಬೈಕ್ ಗಳು ತೇಲಾಡುತ್ತಿದ್ದವು. ಅಗ್ನಿಶಾಮಕ ಸಿಬ್ಬಂದಿ ನೀರು ಹೊರ ಹಾಕಲು ಹರಸಾಹಸಟ್ಟರು.

ಇನ್ನೂ ಕೆಲ ದಿನ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಮಳೆಯಿಂದ ಆಗಬಹುದಾದ ಅನಾಹುತ ತಪ್ಪಿಸಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ನಮ್ಮನ್ನೇಕೆ ವೈರಿಗಳಂತೆ ನೋಡುತ್ತೀರಿ? ನಾವು ಸಹೋದ್ಯೋಗಿಗಳು: ಡಿಸಿಎಂ ಡಿಕೆ ಶಿವಕುಮಾರ್