ಶ್ರದ್ಧಾಂಜಲಿ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದ ಟಿಕೆಟ್ ಕಲೆಕ್ಟರ್ ಅರೆಸ್ಟ್

Published : Feb 16, 2019, 12:09 PM ISTUpdated : Feb 16, 2019, 12:48 PM IST
ಶ್ರದ್ಧಾಂಜಲಿ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದ ಟಿಕೆಟ್ ಕಲೆಕ್ಟರ್ ಅರೆಸ್ಟ್

ಸಾರಾಂಶ

ಪುಲ್ವಮಾದಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ 44 ಯೊಧರು ವೀರ ಮರಣವನ್ನಪ್ಪಿದ್ದು, ಈ ಘಟನೆಗೆ ಇಡೀ ರಾಷ್ಟ್ರವೇ ಕಂಬನಿ ಮಿಡಯುತ್ತಿದೆ. ಇದೇ ವೇಳೆ ಉತ್ತರ ಪ್ರದೇಶದಲ್ಲಿ ಓರ್ವ ಟಿಕೆಟ್ ಕಲೆಕ್ಟರ್ ಪಾಕಿಸ್ತಾನ ಜಿಂದಾಬಾದ್  ಎಂದು ಹೇಳಿ ಅರೆಸ್ಟ್ ಆಗಿದ್ದಾರೆ. 

ಅಲಿಗಢ : ಪುಲ್ವಾಮದಲ್ಲಿ ನಡೆದ ಭೀಕರ ಉಗ್ರರ ದಾಳಿಯಲ್ಲಿ 44 ಯೋಧರು ವೀರಮರಣವನ್ನಪ್ಪಿದ್ದಾರೆ. ಈ ಘಟನೆಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಆದರೆ ಕೆಲವು  ವಿಕೃತ ಮನಸ್ಥಿತಿಗಳು ಇಂತಹ ಸಂದರ್ಭದಲ್ಲಿಯೂ ಕೂಡ ತಮ್ಮ ಕೊಂಕನ್ನು ಮುಂದುವರಿಸಿವೆ. 

ಇಲ್ಲಿನ ರೈಲು ನಿಲ್ದಾಣದಲ್ಲಿ ಕೆಲವು ಪ್ರಯಾಣಿಕರು ಪುಲ್ವಾಮಾ ದಾಳಿಯಲ್ಲಿ ಮೃತರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಕಿರಿಯ ಟಿಕೆಟ್ ತಪಾಸಕ ಉಪೇಂದ್ರ ಕುಮಾರ ಬಹಾದ್ದೂರ್ ಸಿಂಗ್ (39) ಎಂಬಾತ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿದ.

ಈ ಹಿನ್ನೆಲೆಯಲ್ಲಿ ಅತನನ್ನು ದೇಶದ ಸಮಗ್ರತೆಗೆ ಧಕ್ಕೆ ತಂದ (153-ಬಿ) ಸೆಕ್ಷನ್ ಅಡಿ ಕೇಸು ಹಾಕಿ ಬಂಧಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ನೇಪಾಳ ಜೆನ್‌-ಝೀ ದಂಗೆ: ₹8.5 ಸಾವಿರ ಕೋಟಿ ನಷ್ಟ
ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು